ಕಣಿವೆ ಗ್ರಾಮದಲ್ಲಿ 18ರಿಂದ 30 ವರ್ಷದೊಳಗಿನ 19 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಮೃತರೆಲ್ಲರೂ ಪಂಜಾಬ್ ಪ್ರಾಂತ್ಯದವರಾಗಿದ್ದು, ಕಾರ್ಮಿಕರಾಗಿ ಕೆಲಸ ಮಾಡುವುದಕ್ಕಾಗಿ ಯುರೋಪ್ ತೆರಳು ಸಿದ್ಧತೆ ನಡೆಸಿದ್ದರು ಎಂಬುದು ಅವರ ಪ್ರಯಾಣ ದಾಖಲೆಗಳಿಂದ ತಿಳಿದು ಬಂದಿರುವುದಾಗಿ ತರ್ಬತ್ ಜಿಲ್ಲೆಯ ಆಡಳಿತಾಧಿಕಾರಿ ದರ್ಮೂನ್ ಬವಾನಿ ಅವರು ಹೇಳಿದ್ದಾರೆ.