ಮಯನ್ಮಾರ್ ನಿಂದ ಪಲಾಯನ ಮಾಡಿದ 410,000 ರೋಹಿಂಗ್ಯಾ ಮುಸ್ಲಿಮರಲ್ಲಿ ಎಷ್ಟು ಮಂದಿ ದೇಶಕ್ಕೆ ಮರಳಲಿದ್ದಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಮಯನ್ಮಾರ್ ಅಲ್ಲಿ ವಾಸಿಸಲು ಬಯಸುವ ಮುಸ್ಲಿಂ ಜನಾಂಗದ ಹಕ್ಕುಗಳ ವಿಷಯದಲ್ಲಿ ವಿನಾಶಕಾರಿ ಚರ್ಚೆಗೆ ಈಗ ನಮ್ಮ ದೇಶ ಗ್ರಾಸವಾಗಿದೆ.
ಮಯನ್ಮಾರ್ ಸೈನ್ಯವು ಈ ಹಿಂದೆ ಭಯೋತ್ಪೊಆದಕರೊದನೆ ನಂಟು ಹೊಂದಿದ್ದ ರೋಹಿಂಗ್ಯಾಗಳನ್ನು ದೇಅದಿಂದ ಹೊರ್ದೂಡುವುದಾಗಿ ಹೇಳಿತ್ತು. ಆದರೆ ನಾವೆಲ್ಲಿಯೂ ರೋಹಿಂಗ್ಯಾಗಳನ್ನು ರಾಷ್ಟ್ರದಿಂದ ಹೊರಹಾಕುತ್ತೇವೆ ಎಂಡು ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಆದರೆ ವಿಶ್ವ ಸಂಸ್ಥೆಯು ಮಾಯನ್ಮಾರ್ ರೋಹಿಂಗ್ಯಾ ಹಳ್ಳಿಗಳ ಮೇಲೆ ವಿನಾಕಾರಣ ಸೈನಿಕರನ್ನು ನುಗ್ಗಿಸಿ ಅವರನ್ನು ಹಳ್ಳಿಯಿಂದ ಓಡಿಸಿದ್ದಲ್ಲದೆ ಅವರ ಗುಡಿಸಲನ್ನು, ವಸತಿಯನ್ನೂ ನಾಶಪಡಿಸಿದೆ ಎಂಡು ಆರೋಪಿಸಿದೆ.
ಕಳೆದ ಆಗಸ್ಟ್ ನಲ್ಲಿ ಯಾರು ಭಯೋತ್ಪಾದಕರೊದನೆ ಸಂಪರ್ಕ ಹೊಂದಿದ್ದರೋ ಅಂತಹಾ ರೋಹಿಂಗ್ಯಾ ಮುಸ್ಲೀಮರ ವಸತಿ ಮೇಲೆ ಸೈನ್ಯ ದಾಳಿ ನಡೆಸಿತ್ತು.
ಈ ಧಾಳಿಯಿಂದ ನೊಂದ ಸಾವಿರಾರು ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು ಮತ್ತು ವಿಶ್ವದ ಅತಿ ದೊಡ್ಡ ನಿರಾಶ್ರಿತರ ಶಿಬಿರದಲ್ಲಿ ಒಂದಾದ ರೋಹಿಂಗ್ಯಾ ನಿರಾಶ್ರಿತರ ಶಿಬಿರವು ಅಲ್ಲಿ ನಿರ್ಮಾಣವಾಗಿದೆ
ಇನ್ನು 30,000 ಜನಾಂಗೀಯ ರಾಖೈನ್ ನ ಬೌದ್ಧರು ಮತ್ತು ಹಿಂದೂಗಳು ಕೂಡ ಪಲಾಯನ ಮಾಡಿದ್ದಾರೆ- ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್ ಎಸ್ಎ) ಆಗಸ್ಟ್ 25ರ ದಾಳಿಯಲ್ಲಿ ಮಾಯನ್ಮಾರ್ ಸೈನ್ಯದ ಸ್ಪಷ್ಟ ಗುರಿ ಆಗಿತ್ತು.