ತಂತ್ರಜ್ಞಾನದಿಂದಾಗಿ ಇಂದಿನ ಜೀವನ ಗತಿ ಬದಲಾಗಿದೆ, ವಿಶ್ವದ ಎದುರು ಈಗ ಶಾಂತಿ ಸ್ಥಿರತೆ ಸುರಕ್ಷತೆ ಬಹುದೊಡ್ಡ ಸವಾಲುಗಳಾಗಿವೆ, ಜಾಗತಿಕ ತಾಪಮಾನ ಜಗತ್ತಿನ ಮುಂದಿರುವ ಬಹುದೊಡ್ಡ ಅಪಾಯ, ಹಾಗೆಯೇ ಎಲ್ಲಾ ರಾಷ್ಟ್ರಗಳು ಆತ್ಮಕೇಂದ್ರಿತವಾಗುತ್ತಿರುವುದು ಮತ್ತೊಂದು ದೊಡ್ಡ ಅಪಾಯ, ಜಾಗತಿಕ ತಾಪಮಾನ, ಭಯೋತ್ಪಾದನೆ ಅಪಾಯಗಳನ್ನು ತಡೆಗಟ್ಟಲು 21 ನೇ ಶತಮಾನದಲ್ಲಿ ಜಾಗತಿಕ ಒಗ್ಗಟ್ಟು ಪ್ರಮುಖವಾದದ್ದು, ಎಂದು ಹೇಳಿರುವ ಪ್ರಧಾನಿ ವಸುದೈವ ಕುಟುಂಬಕಂ ಶ್ಲೋಕವನ್ನು ಪಠಿಸಿದ್ದಾರೆ.