ಭಾರತೀಯ ರಾಯಭಾರಿ ಅಧಿಕಾರಿ ಗುರುದ್ವಾರಕ್ಕೆ ತೆರಳು ಪಾಕ್ ನಿರ್ಬಂಧ!

ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸಿದೆ.
ಭಾರತೀಯ ರಾಯಭಾರಿ ಅಧಿಕಾರಿ ಗುರುದ್ವಾರಕ್ಕೆ ತೆರಳು ಪಾಕ್ ನಿರ್ಬಬಂಧ!
ಭಾರತೀಯ ರಾಯಭಾರಿ ಅಧಿಕಾರಿ ಗುರುದ್ವಾರಕ್ಕೆ ತೆರಳು ಪಾಕ್ ನಿರ್ಬಬಂಧ!
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸಿದೆ. 
ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಮುಂಚೆಯೇ ಎಲ್ಲಾ ಅನುಮತಿಗಳನ್ನು ಪಡೆದುಕೊಂಡಿದ್ದರೂ ಸಹ ಅಜಯ್ ಬಿಸಾರಿಯಾ ಹಾಗೂ ಅವರ ಪತ್ನಿಗೆ ಅನುಮತಿ ನಿರಾಕರಿಸಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಪಾಕಿಸ್ತಾನದ ವಿದೇಶಾಂಗ ಇಲಾಖೆಯೊಂದಿಗೆ ವಿಷಯ ಪ್ರಸ್ತಾಪಿಸಿದೆ. 
ಸಿಖ್ ಸಮುದಾಯದವರು ಬೈಸಖಿ ಹಬ್ಬಕ್ಕೆ ತೆರಳಿದ್ದಾಗ ಭಾರತೀಯ ಅಧಿಕಾರಿಗಳಿಗೆ ಶಿಷ್ಟಾಚಾರ ಪಾಲನೆ ಮಾಡಲು ಬಿಡದೇ ಪಾಕಿಸ್ತಾನ ಇದೇ ರೀತಿಯ ವರ್ತನೆ ತೋರಿತ್ತು. ಇದಾದ ಕೆಲವೇ ತಿಂಗಳುಗಳಲ್ಲಿ ಪಾಕಿಸ್ತಾನ ಮತ್ತೆ ಭಾರತೀಯ ಅಧಿಕಾರಿ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಅನುಮತಿ ನಿರಾಕರಿಸಿದೆ. 
ಇಟಿಪಿಬಿಯ ಅಧ್ಯಕ್ಷರ ಆಹ್ವಾನದ ಮೇರೆಗೆ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಬೇಕಿತ್ತು. ಆದರೆ ಮಾರ್ಗಮಧ್ಯದಲ್ಲೇ ಅವರನ್ನು ವಾಪಸ್ ಕರೆಸಿಕೊಂಡು ಭದ್ರತಾ ಕಾರಣಗಳನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com