ಸಾಕ್ಷಿಗಳಿಗೆ ಬೆದರಿಕೆ ಸೇರಿ ನಾನಾ ಕಾರಣಗಳಿಂದ ನೀರವ್ ಮೋದಿಗೆ ಜಾಮೀನು ನೀಡಲು ವೆಸ್ಟ್ ಮಿನಿಸ್ಟರ್ಸ್ ನ್ಯಾಯಾಲಯದ ನ್ಯಾಯಾಧೀಶ ಎಮ್ಮಾ ಅರ್ಬುತ್ನೋಟ್ರ ಅವರ ನಿರ್ಧಾರವನ್ನು ಮೋದಿ ಪ್ರಶ್ನಿಸಲಿದ್ದಾರೆ. "ತನ್ನ ಜಾಮೀನುತಿರಸ್ಕಾರದ ತೀರ್ಪನ್ನು ಪ್ರಶ್ನಿಸಿ ಮನವಿ ಸಲ್ಲಿಸಲು ಮೋದಿ ಉದ್ದೇಶಿಸಿದ್ದಾರೆ. ಆದರೆ ಅವರಿನ್ನೂ ಮೇಲ್ಮನವಿ ಸಲ್ಲಿಸಿಲ್ಲ."ಸಿಪಿಎಸ್ ವಕ್ತಾರರು ಮಂಗಳವಾರ ಹೇಳಿದ್ದಾರೆ.