ಕೋವಿಡ್-19 ಎರಡನೇ ಅಲೆ: ಭಾರತದಿಂದ ಪ್ರಯಾಣಿಸುವವರಿಗೆ ನಿತ್ಯಾನಂದನ 'ಕೈಲಾಸ'ದಲ್ಲಿ ನಿರ್ಬಂಧ!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನದೇ ದೇಶ ಕೈಲಾಸ'ವನ್ನು ಘೋಷಿಸಿದ್ದು ಎಲ್ಲರಿಗೂ ತಿಳಿದೇ ಇದೆ. 
ನಿತ್ಯಾನಂದ
ನಿತ್ಯಾನಂದ
Updated on

ಕೈಲಾಸ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನದೇ ದೇಶ ಕೈಲಾಸ'ವನ್ನು ಘೋಷಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಹೊಸ ವಿಷಯ ಏನಪ್ಪ ಅಂದ್ರೆ ಕೋವಿಡ್-19 ಎರಡನೇ ಅಲೆಯಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಭಾರತದಿಂದ ಪ್ರಯಾಣಿಸುವವರಿಗೆ ನಿತ್ಯಾನಂದ ಕೈಲಾಸಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ.

ನ್ಯೂಸ್18 ವರದಿಯ ಪ್ರಕಾರ, ನಿತ್ಯಾನಂದನ ಕೈಲಾಸದಲ್ಲಿ ಭಾರತಕ್ಕೆ ಅಷ್ಟೇ ಅಲ್ಲದೇ ಬ್ರೆಜಿಲ್, ಯೂರೋಪಿಯನ್ ಯೂನಿಯನ್, ಮಲೇಷ್ಯಾಗಳಿಂದ ಬರುವವರಿಗೂ ನಿರ್ಬಂಧ ವಿಧಿಸಲಾಗಿದೆ. ಕೈಲಾಸದ ಎಲ್ಲಾ ರಾಯಭಾರಿ ಕಚೇರಿಗಳೂ ಸಹ ಮುಚ್ಚಲ್ಪಟ್ಟಿವೆ ಎಂದು ಅಧಿಕೃತ ಟ್ವೀಟ್ ಹ್ಯಾಂಡಲ್ ನಲ್ಲಿ ಬರೆಯಲಾಗಿದೆ.

ಏ.21 ರಂದು ಒಂದೇ ದಿನದಲ್ಲಿ ಭಾರತದಲ್ಲಿ 3.14 ಲಕ್ಷ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದರೆ, ಒಂದೇ ದಿನದಲ್ಲಿ 2,104 ಸಾವುಗಳು ವರದಿಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com