ಪಿಟಿಐ ಪಕ್ಷದ ಬೆಂಬಲಿಗರ ಪ್ರತಿಭಟನೆ
ಪಿಟಿಐ ಪಕ್ಷದ ಬೆಂಬಲಿಗರ ಪ್ರತಿಭಟನೆ

ಪಾಕಿಸ್ತಾನ ಚುನಾವಣೆ: 100 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಬೆಂಬಲಿತ ಪಪಕ್ಷೇತರರಿಗೆ ಗೆಲುವು, 'ಏಕೀಕೃತ ಸರ್ಕಾರ'ಕ್ಕೆ ಸೇನೆ ಕರೆ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಶನಿವಾರ "ಏಕೀಕೃತ" ಸರ್ಕಾರಕ್ಕೆ ಕರೆ ನೀಡಿದ್ದಾರೆ ಮತ್ತು ಸ್ವಹಿತಾಸಕ್ತಿಗಳಿಗಿಂತ ಮಿಗಿಲಾಗಿ ಜನರಿಗೆ ಆಡಳಿತ ಮತ್ತು ಸೇವೆಯಲ್ಲಿ ಪ್ರಯತ್ನಗಳನ್ನು ಒಟ್ಟುಗೂಡಿಸಲು ರಾಜಕೀಯ ನಾಯಕರನ್ನು ಒತ್ತಾಯಿಸಿದ್ದಾರೆ.
Published on

ರಾವಲ್ಪಿಂಡಿ: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಶನಿವಾರ "ಏಕೀಕೃತ" ಸರ್ಕಾರಕ್ಕೆ ಕರೆ ನೀಡಿದ್ದಾರೆ ಮತ್ತು  ಸ್ವಹಿತಾಸಕ್ತಿಗಳಿಗಿಂತ ಮಿಗಿಲಾಗಿ ಜನರಿಗೆ ಆಡಳಿತ ಮತ್ತು ಸೇವೆಯಲ್ಲಿ ಪ್ರಯತ್ನಗಳನ್ನು ಒಟ್ಟುಗೂಡಿಸಲು ರಾಜಕೀಯ ನಾಯಕರನ್ನು ಒತ್ತಾಯಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆದ ಎರಡು ದಿನಗಳ ನಂತರ ದೇಶ ಅತಂತ್ರ ಸಂಸತ್  ಹೊಂದುವ ಹಾದಿಯಲ್ಲಿದೆ ಎಂಬ ಅಂಶದ ಹಿನ್ನೆಲೆಯಲ್ಲಿ ಮುನೀರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.  ಈ ಹಿಂದೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಪ್ರಬಲ ಮಿಲಿಟರಿಯ ಬೆಂಬಲ ಪಡೆದಿರುವಂತೆ ಕಂಡುಬಂದರು . ಅಲ್ಲದೇ ಏಕೀಕೃತ ಸರ್ಕಾರಕ್ಕೆ ಕರೆ ನೀಡಿದರು.

ಗುರುವಾರ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿತ ಸ್ವತಂತ್ರರು ಸಿಂಹಪಾಲು 101 ಸ್ಥಾನಗಳನ್ನು ಗೆದ್ದುಕೊಂಡಿದ್ದು ಅಚ್ಚರಿಯ ಸಂಗತಿಯಾಗಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 73 ಸ್ಥಾನಗಳನ್ನು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54, ಮುತಾಹಿದಾ ಕ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ) 17 ಮತ್ತು ಇತರ ಸ್ಥಾನಗಳನ್ನು ಸಣ್ಣ ಪಕ್ಷಗಳಿಗೆ ನೀಡಲಾಗಿದೆ. 265 ಸ್ಥಾನಗಳ ಪೈಕಿ 255 ಸ್ಥಾನಗಳ ಫಲಿತಾಂಶವನ್ನು ಪಾಕಿಸ್ತಾನದ ಚುನಾವಣಾ ಆಯೋಗ ಘೋಷಿಸಿದೆ.

ಸರ್ಕಾರ ರಚಿಸಲು ಪಕ್ಷವೊಂದು ರಾಷ್ಟ್ರೀಯ ಅಸೆಂಬ್ಲಿಯ 265 ಸ್ಥಾನಗಳ ಪೈಕಿ 133 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಅಭ್ಯರ್ಥಿಯ ಮರಣದ ನಂತರ ಒಂದು ಸ್ಥಾನಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ತನ್ನ 75-ಕ್ಕೂ ಹೆಚ್ಚು ವರ್ಷಗಳ ಅಸ್ತಿತ್ವದ ಅರ್ಧಕ್ಕಿಂತ ಹೆಚ್ಚು ಕಾಲ ದಂಗೆ-ಪೀಡಿತ ಪಾಕಿಸ್ತಾನವನ್ನು ಆಳಿದ ಪ್ರಬಲ ಪಾಕಿಸ್ತಾನದ ಸೇನೆಯು ಭದ್ರತೆ ಮತ್ತು ವಿದೇಶಾಂಗ ನೀತಿಯ ವಿಷಯಗಳಲ್ಲಿ ಸಾಕಷ್ಟು ಅಧಿಕಾರವನ್ನು ಹೊಂದಿದೆ.

 ಶನಿವಾರ, ಸೇನೆಯ ಮಾಧ್ಯಮ ವಿಭಾಗವು ಹೊರಡಿಸಿದ ಸೇನಾ ಮುಖ್ಯಸ್ಥರ ಹೇಳಿಕೆಯಲ್ಲಿ ಪಾಕಿಸ್ತಾನಿ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮುಕ್ತ ಮತ್ತು ಅಡೆತಡೆಯಿಲ್ಲದೆ ಭಾಗವಹಿಸುವುದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆಗೆ ಅವರ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ. 

ರಾಜಕೀಯ ನಾಯಕತ್ವ ಮತ್ತು ಅವರ ಕಾರ್ಯಕರ್ತರು ಸ್ವಹಿತಾಸಕ್ತಿಗಳಿಗಿಂತ ಮೇಲೇರಬೇಕು ಮತ್ತು ಜನರ ಆಡಳಿತ ಮತ್ತು ಸೇವೆಯಲ್ಲಿ ಪ್ರಯತ್ನಗಳನ್ನು ಸಂಯೋಜಿಸಬೇಕು ಎಂದು ಮುನೀರ್ ಹೇಳಿದ್ದಾರ.ಇದು ಪ್ರಜಾಪ್ರಭುತ್ವವನ್ನು ಕ್ರಿಯಾತ್ಮಕ ಮತ್ತು ಉದ್ದೇಶಪೂರ್ವಕವಾಗಿಸಲು ಬಹುಶಃ ಏಕೈಕ ಮಾರ್ಗವಾಗಿದೆ. ಪಾಕಿಸ್ತಾನದ ಜನರು ಸಂವಿಧಾನದಲ್ಲಿ ತಮ್ಮ ಸಂಯೋಜಿತ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ ಮತ್ತು ರಾಜಕೀಯ ಪ್ರಬುದ್ಧತೆ ಮತ್ತು ಏಕತೆಯೊಂದಿಗೆ ಸಾಗುವುದು ಈಗ ಎಲ್ಲಾ ರಾಜಕೀಯ ಪಕ್ಷಗಳ ಮೇಲಿನ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. 

"ಸುಮಾರು 6,000 ಆಯ್ದ "ಅತಿ ಸೂಕ್ಷ್ಮ ಮತಗಟ್ಟೆಗಳು ಮತ್ತು 7,800 ಕ್ಕೂ ಹೆಚ್ಚು ಕ್ಯೂಆರ್‌ಎಫ್‌ಗಳಲ್ಲಿ 1,37,000 ಸೇನಾ ಸಿಬ್ಬಂದಿ ಮತ್ತು ನಾಗರಿಕ ಸಶಸ್ತ್ರ ಪಡೆಗಳನ್ನು ನಿಯೋಜಿಸುವ ಮೂಲಕ ಸಾರ್ವಜನಿಕರಿಗೆ ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com