Sri Lanka: ಪ್ರಧಾನಿ ಮೋದಿಗೆ 'ಮಿತ್ರ ವಿಭೂಷಣ' ಪ್ರಶಸ್ತಿ ಪ್ರದಾನ; ಏನಿದರ ವಿಶೇಷತೆ?

ದ್ವೀಪ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಈ ಪ್ರಶಸ್ತಿಯನ್ನು ಫೆಬ್ರವರಿ 2008 ರಲ್ಲಿ ಅಂದಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಆರಂಭಿಸಿದ್ದರು.
Sri Lanka confers Mithra Vibhushana award on PM Modi
ಪ್ರಧಾನಿ ಮೋದಿಗೆ 'ಮಿತ್ರ ವಿಭೂಷಣ' ಪ್ರಶಸ್ತಿ ಪ್ರದಾನ
Updated on

ಕೊಲಂಬೊ: ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಗುರುತಿಸಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು ಇಂದು 'ಮಿತ್ರ ವಿಭೂಷಣ' ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದ್ದಾರೆ.

ದ್ವೀಪ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಈ ಪ್ರಶಸ್ತಿಯನ್ನು ಫೆಬ್ರವರಿ 2008 ರಲ್ಲಿ ಅಂದಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಆರಂಭಿಸಿದ್ದರು. ಈ ಹಿಂದೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಮತ್ತು ಪ್ಯಾಲೆಸ್ತೀನ್ ಮಾಜಿ ನಾಯಕ ಯಾಸರ್ ಅರಾಫತ್ ಅವರಿಗೆ ನೀಡಿ ಗೌರವಿಸಲಾಗಿತ್ತು.

ಅಧ್ಯಕ್ಷ ದಿಸಾನಾಯಕ ಅವರಿಂದ ಶ್ರೀಲಂಕಾ ಮಿತ್ರ ವಿಭೂಷಣ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಗೌರವವಾಗಿದೆ. ಇದು 1.4 ಬಿಲಿಯನ್ ಭಾರತೀಯರಿಗೆ ಗೌರವದ ವಿಷಯವಾಗಿದೆ'' ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಪ್ರಶಸ್ತಿ ವಿಶೇಷತೆ

ಕೊಲಂಬೊದ ಅಧ್ಯಕ್ಷೀಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ದಿಸಾನಾಯಕ ಅವರು ಮೋದಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಗೌರವವನ್ನು ಪಡೆದವರಿಗೆ ಶ್ರೀಲಂಕಾದ ಒಂಬತ್ತು ಬಗೆಯ ರತ್ನಗಳು ಮತ್ತು ಕಮಲ, ಗೋಳ, ಸೂರ್ಯ, ಚಂದ್ರ ಮತ್ತು ಅಕ್ಕಿಯ ಕಟ್ಟುಗಳ ಚಿಹ್ನೆಗಳಿಂದ ಅಲಂಕರಿಸಲ್ಪಟ್ಟ ಕುತ್ತಿಗೆಗೆ ಧರಿಸಲು ಬೆಳ್ಳಿ ಪದಕವನ್ನು, ಒಂದು ಪ್ರಶಂಸಾಪತ್ರ ನೀಡಲಾಗುತ್ತದೆ.

ಪದಕದ ಮೇಲಿನ ಧರ್ಮ ಚಕ್ರವು ಎರಡೂ ರಾಷ್ಟ್ರಗಳ ಸಾಂಸ್ಕೃತಿಕ ಸಂಪ್ರದಾಯಗಳನ್ನು ರೂಪಿಸಿರುವ ಬೌದ್ಧ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಅಕ್ಕಿಯ ಕಟ್ಟುಗಳಿಂದ ಅಲಂಕರಿಸಲ್ಪಟ್ಟ ಪನ್ ಕಳಸ ಅಥವಾ ಮಡಕೆ ಸಮೃದ್ಧಿ ಮತ್ತು ನವೀಕರಣವನ್ನು ಸಂಕೇತಿಸುತ್ತದೆ. ನವರತ್ನ ಅಥವಾ ಒಂಬತ್ತು ಅಮೂಲ್ಯ ರತ್ನಗಳನ್ನು ಕಮಲದ ದಳಗಳಿಂದ ಸುತ್ತುವರೆದಿರುವುದರದೊಳಗೆ ಚಿತ್ರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com