ದುಬೈನಲ್ಲಿ Hindu ದ್ವೇಷಿ: ಇಬ್ಬರು ತೆಲಂಗಾಣ ನಿವಾಸಿಗಳನ್ನು ಇರಿದು ಕೊಂದ Pak ನ ಜಿಹಾದಿ!

ಧಾರ್ಮಿಕ ದ್ವೇಷದ ಕಾರಣಕ್ಕೆ ತೆಲಂಗಾಣದ ಇಬ್ಬರನ್ನು ಪಾಕಿಸ್ತಾನದ ವ್ಯಕ್ತಿಯೊಬ್ಬ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿ ಪ್ರೇಮ್ ಸಾಗರ್
ಮೃತ ವ್ಯಕ್ತಿ ಪ್ರೇಮ್ ಸಾಗರ್
Updated on

ಧಾರ್ಮಿಕ ದ್ವೇಷದ ಕಾರಣಕ್ಕೆ ತೆಲಂಗಾಣದ ಇಬ್ಬರನ್ನು ಪಾಕಿಸ್ತಾನದ ವ್ಯಕ್ತಿಯೊಬ್ಬ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹೃದಯವಿದ್ರಾವಕ ಘಟನೆ ದುಬೈನಲ್ಲಿ ನಡೆದಿದೆ. ಈ ಘಟನೆ ಕಳೆದ ಶುಕ್ರವಾರ ನಡೆದಿರುವಂತೆ ತೋರುತ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಿರ್ಮಲ್ ಜಿಲ್ಲೆಯ ಸೋನ್ ಮಂಡಲದ 40 ವರ್ಷದ ಪ್ರೇಮ್ ಸಾಗರ್ ಮತ್ತು ನಿಜಾಮಾಬಾದ್ ಜಿಲ್ಲೆಯ ಶ್ರೀನಿವಾಸ್. ಅವರಿಬ್ಬರೂ ದುಬೈನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪ್ರೇಮಾ ಸಾಗರ್ ಕಳೆದ ಆರು ವರ್ಷಗಳಿಂದ ಜೀವನೋಪಾಯಕ್ಕಾಗಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಶ್ರೀನಿವಾಸ್ ದುಬೈಗೆ ಹೋಗಿದ್ದರು. ಇನ್ನು ಇಬ್ಬರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು ಅವರ ಮೇಲೆ ಪಾಕಿಸ್ತಾನಿ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ಮಾಡಿ ಕೊಂದಿದ್ದಾನೆ.

ಧಾರ್ಮಿಕ ವಿವಾದದಿಂದಾಗಿ ಈ ಘಟನೆ ನಡೆದಿದೆ ಎಂದು ನಂಬಲಾಗಿದೆ. ಈ ವಿಷಯವನ್ನು ಅವರ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ತಿಳಿಸಲಾಯಿತು. ಈ ಅಮಾನವೀಯ ಘಟನೆಯು ದುಬೈನಲ್ಲಿರುವ ಭಾರತೀಯರಲ್ಲಿ ತೀವ್ರ ಕಳವಳವನ್ನುಂಟುಮಾಡಿದೆ. ಅಲ್ಲಿನ ಅಧಿಕಾರಿಗಳು ಪ್ರಸ್ತುತ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮೃತ ವ್ಯಕ್ತಿ ಪ್ರೇಮ್ ಸಾಗರ್
ಬೆಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ: ಬುರ್ಖಾ ಬಿಚ್ಚು, ಕಾಫಿರ್ ಜೊತೆ ಕುಳಿತ್ತಿದ್ದೀಯಾ ಎಂದು ಮುಸ್ಲಿಂ ಯುವತಿಗೆ ಕಿರುಕುಳ, Video!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com