ಕೆನಡಾ: ಉದ್ದೇಶಿತ ದಾಳಿ, ಗುಂಡಿಕ್ಕಿ ಪಂಜಾಬ್‌ನ ಇಬ್ಬರು ಯುವಕರ ಹತ್ಯೆ!

ಉತ್ತಮ ವೃತ್ತಿ ಹುಡುಕಾಟದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕೆನಡಾಕ್ಕೆ ತೆರಳಿದ್ದರು. ಈ ಘಟನೆಯನ್ನು ಉದ್ದೇಶಿತ ದಾಳಿ ಎಂದು ಎಡ್ಮಂಟನ್ ಪೊಲೀಸ್ ಸೇವೆ (EPS) ಶಂಕಿಸಿದ್ದು, ತನಿಖೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಚಂಡೀಗಢ: ಕೆನಡಾದ ಆಗ್ನೇಯ ಎಡ್ಮಂಟನ್‌ನಲ್ಲಿ ನಡೆದ ಉದ್ದೇಶಿತ ದಾಳಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಪಂಜಾಬ್‌ ಮೂಲದ ಇಬ್ಬರು ಯುವಕರನ್ನು ಹತ್ಯೆ ಮಾಡಿದ್ದಾರೆ. ಮೃತರನ್ನು ಬರೆಹ್ ಗ್ರಾಮದ ಗುರುದೀಪ್ ಸಿಂಗ್ ಮತ್ತು ಪಂಜಾಬ್‌ನ ಮಾನ್ಸಾದ ಬುಧ್ಲಾಡಾ ಬಳಿಯ ಉದ್ದತ್ ಸೈದೇವಾಲಾ ಗ್ರಾಮದ ರಣಬೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಗುರುದೀಪ್ ಅವರ ಕುಟುಂಬವು ಅವರ ಸ್ನೇಹಿತ ಅರ್ಷ್ ದೀಪ್ ಅವರಿಂದ ಪಡೆದ ಮಾಹಿತಿ ಪ್ರಕಾರ, ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಇಬ್ಬರು ಹೋಗುತ್ತಿದ್ದಾಗ ಶುಕ್ರವಾರ ಮುಂಜಾನೆ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗಿದೆ.

ಉತ್ತಮ ವೃತ್ತಿ ಹುಡುಕಾಟದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕೆನಡಾಕ್ಕೆ ತೆರಳಿದ್ದರು. ಈ ಘಟನೆಯನ್ನು ಉದ್ದೇಶಿತ ದಾಳಿ ಎಂದು ಎಡ್ಮಂಟನ್ ಪೊಲೀಸ್ ಸೇವೆ (EPS) ಶಂಕಿಸಿದ್ದು, ತನಿಖೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ.

ಆಗ್ನೇಯ ಎಡ್ಮಂಟನ್‌ನಲ್ಲಿ ಇಬ್ಬರು ವಯಸ್ಕ ಪುರುಷರ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸುತ್ತಿದೆ ಎಂದು EPS ಹೇಳಿಕೆಯಲ್ಲಿ ತಿಳಿಸಿದೆ. ತುರ್ತು ವೈದ್ಯಕೀಯ ಸೇವೆ ಬರುವವರೆಗೂ ಅಧಿಕಾರಿಗಳು ಜೀವ ಉಳಿಸಲು ಪ್ರಯತ್ನಿಸಿದರು, ಆದರೆ ಸ್ಥಳದಲ್ಲಿ ಇಬ್ಬರು ಸಂತ್ರಸ್ತರು ಮೃತಪಟ್ಟಿರುವುದಾಗಿ ಘೋಷಿಸಿದೆ.

Casual Images
ಕೆನಡಾದಲ್ಲಿ ಪಂಜಾಬಿ ಗಾಯಕ ತೇಜಿ ಕಹ್ಲೋನ್ ಮೇಲೆ ಗುಂಡಿನ ದಾಳಿ: ಬುದ್ದಿ ಕಲಿಯದಿದ್ದರೆ ಸಾವು ನಿಶ್ಚಿತ; ಗೋದಾರಾ ಗ್ಯಾಂಗ್ ಎಚ್ಚರಿಕೆ

EPS ಪೊಲೀಸರು ತನಿಖೆ ನಡೆಸುತ್ತಿದ್ದು, ಡಿಸೆಂಬರ್ 16 ಮತ್ತು 17 ರಂದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com