ಬಾಂಗ್ಲಾದೇಶ ಹಿಂಸಾಚಾರ: ಹತ್ಯೆಗೀಡಾದ ಹಿಂದೂ ಕಾರ್ಮಿಕನ ಕುಟುಂಬದ ಜವಾಬ್ದಾರಿ ವಹಿಸಿಕೊಂಡ ಸರ್ಕಾರ

ಡಿಸೆಂಬರ್ 18 ರಂದು ಮೈಮೆನ್ಸಿಂಗ್‌ನಲ್ಲಿ ಉದ್ರಿಕ್ತ ಗುಂಪು ಬೆಂಕಿಯಿಂದ ಸುಟ್ಟು ಹತ್ಯೆಗೀಡಾದ 25 ವರ್ಷದ ದೀಪು ದಾಸ್ ಅವರ ದುಃಖತಪ್ತ ಕುಟುಂಬಸ್ಥರನ್ನು ಶಿಕ್ಷಣ ಸಲಹೆಗಾರ ಸಿ.ಆರ್. ಅಬ್ರಾರ್ ಭೇಟಿ ಮಾಡಿ ಸಾಂತ್ವನ ಹೇಳಿದರು.
Bangladesh Education Adviser C.R. Abrar meets Rabilal Das, father of Dipu Chanrda Das, and expresses his condolences in Mymensingh
ಬಾಂಗ್ಲಾದೇಶದ ಶಿಕ್ಷಣ ಸಲಹೆಗಾರ ಸಿ.ಆರ್. ಅಬ್ರಾರ್ ಅವರು ದೀಪು ಚಂದ್ರದಾಸ್ ಅವರ ತಂದೆ ರಬಿಲಾಲ್ ದಾಸ್ ಅವರನ್ನು ಭೇಟಿ ಮಾಡಿದರು
Updated on

ಕಳೆದ ವಾರ ಧರ್ಮನಿಂದನೆಯ ಆರೋಪದ ಮೇಲೆ ಹತ್ಯೆಗೀಡಾದ ಹಿಂದೂ ಕಾರ್ಮಿಕನ ಕುಟುಂಬದ ಜವಾಬ್ದಾರಿಯನ್ನು ನಮ್ಮ ಸರ್ಕಾರ ವಹಿಸಿಕೊಳ್ಳುತ್ತದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಹಿರಿಯ ಸಲಹೆಗಾರರು ತಿಳಿಸಿದ್ದಾರೆ.

ಡಿಸೆಂಬರ್ 18 ರಂದು ಮೈಮೆನ್ಸಿಂಗ್‌ನಲ್ಲಿ ಉದ್ರಿಕ್ತ ಗುಂಪು ಬೆಂಕಿಯಿಂದ ಸುಟ್ಟು ಹತ್ಯೆಗೀಡಾದ 25 ವರ್ಷದ ದೀಪು ದಾಸ್ ಅವರ ದುಃಖತಪ್ತ ಕುಟುಂಬಸ್ಥರನ್ನು ಶಿಕ್ಷಣ ಸಲಹೆಗಾರ ಸಿ.ಆರ್. ಅಬ್ರಾರ್ ಭೇಟಿ ಮಾಡಿ ಸಾಂತ್ವನ ಹೇಳಿದರು.

ಸರ್ಕಾರವು ದೀಪು ದಾಸ್ ಅವರ ಮಗು, ಹೆಂಡತಿ ಮತ್ತು ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ಅಬ್ರಾರ್ ತಿಳಿಸಿದರು.

ಕುಟುಂಬವನ್ನು ಭೇಟಿ ಮಾಡುವ ಮೊದಲು, ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೊಂದಿಗೆ ಮಾತುಕತೆ ನಡೆಸಿದರು. ಸರ್ಕಾರದ ಕಡೆಯಿಂದ ಯೂನಸ್ ಅವರು ಸಂತಾಪ ಸೂಚಿಸಿದ್ದಾರೆ ಎಂದರು.

ದಾಸ್ ಅವರ ಕುಟುಂಬಕ್ಕೆ ಸಹಾಯವನ್ನು ಮೊಹಮ್ಮದ್ ಯೂನಸ್ ಖಚಿತಪಡಿಸಿದ್ದಾರೆ. ಈ ಮಧ್ಯೆ, ದಾಸ್ ಅವರ ಕುಟುಂಬಕ್ಕೆ ಆರ್ಥಿಕ ಮತ್ತು ಕಲ್ಯಾಣ ನೆರವು ನೀಡಲಾಗುವುದು. ಸಂಬಂಧಿತ ಅಧಿಕಾರಿಗಳು ಮುಂಬರುವ ಅವಧಿಯಲ್ಲಿ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ ಎಂದು ಯೂನಸ್ ಅವರ ಕಚೇರಿ ದೃಢಪಡಿಸಿದೆ.

Bangladesh Education Adviser C.R. Abrar meets Rabilal Das, father of Dipu Chanrda Das, and expresses his condolences in Mymensingh
Watch | ದೆಹಲಿಯ ಬಾಂಗ್ಲಾದೇಶ ಹೈಕಮಿಷನ್ ಬಳಿ ವಿಎಚ್‌ಪಿ, ಭಜರಂಗ ದಳ ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್

ಪ್ರತಿಭಟನೆ

ದಾಸ್ ಅವರ ಹತ್ಯೆಯು ಢಾಕಾ ಮತ್ತು ಬಾಂಗ್ಲಾದೇಶದ ಇತರೆಡೆಗಳಲ್ಲಿ ಕಾರ್ಖಾನೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಾನವ ಹಕ್ಕುಗಳ ಗುಂಪುಗಳಿಂದ ವ್ಯಾಪಕ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಭಾರತ ತನ್ನ ಕಳವಳ ವ್ಯಕ್ತಪಡಿಸಿದೆ.

ಢಾಕಾದಲ್ಲಿ ಮುಸುಕುಧಾರಿ ಬಂದೂಕುಧಾರಿಗಳಿಂದ ಗುಂಡು ಹಾರಿಸಲ್ಪಟ್ಟ ಆರು ದಿನಗಳ ನಂತರ ಸಿಂಗಾಪುರ ಆಸ್ಪತ್ರೆಯಲ್ಲಿ ತೀವ್ರಗಾಮಿ ಬಲಪಂಥೀಯ ಸಾಂಸ್ಕೃತಿಕ ಗುಂಪು ಇಂಕಿಲಾಬ್ ಮಂಚ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ಗುಂಪು ದಾಳಿ ನಡೆಯಿತು.

ಕಳೆದ ವರ್ಷ ಶೇಖ್ ಹಸೀನಾ ಅವರ ಸರ್ಕಾರವನ್ನು ಉರುಳಿಸಿದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಹಾದಿ ಪ್ರಮುಖ ವ್ಯಕ್ತಿಯಾಗಿದ್ದರು.

ಅವರ ಮರಣದ ನಂತರ, ಬಾಂಗ್ಲಾದೇಶವು ಹೊಸ ಅಶಾಂತಿಯ ಅಲೆಯನ್ನು ಕಂಡಿತು, 1960 ರ ದಶಕದಲ್ಲಿ ಸ್ಥಾಪಿಸಲಾದ ಸಾಮೂಹಿಕ ಪ್ರಸರಣ ಡೈಲಿ ಸ್ಟಾರ್ ಮತ್ತು ಪ್ರೋಥೋಮ್ ಅಲೋ ಮತ್ತು ಎರಡು ಪ್ರಮುಖ ಸಾಂಸ್ಕೃತಿಕ ಗುಂಪುಗಳಾದ ಛಾಯಾನೋಟ್ ಮತ್ತು ಉದಿಚಿ ಶಿಲ್ಪಿ ಗೋಶ್ಟಿ ಕಚೇರಿಗಳಿಗೆ ಗುಂಪು ಬೆಂಕಿ ಹಚ್ಚಿತು.

Bangladesh Education Adviser C.R. Abrar meets Rabilal Das, father of Dipu Chanrda Das, and expresses his condolences in Mymensingh
ದೆಹಲಿ: ಬಾಂಗ್ಲಾದೇಶ ರಾಯಭಾರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್! ವೀಸಾ ಸೇವೆ ಸ್ಥಗಿತ, Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com