ಟರ್ಕಿ ಅಧ್ಯಕ್ಷರ ಬುಡಕ್ಕೆ ಬೆಂಕಿ: ದೇಶ ಬಿಟ್ಟು ಓಡಿ ಹೋದ್ರಾ ಎರ್ಡೋಗನ್? 3ನೇ ದಿನವೂ ಬೀದಿಗಿಳಿದ ಲಕ್ಷಾಂತರ ಮಂದಿ, Video!

ಟರ್ಕಿಯಲ್ಲಿ ಜನರು ಮತ್ತೆ ಬೀದಿಗಿಳಿದಿದ್ದಾರೆ. ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (CHP) ನಾಯಕ, ಟರ್ಕಿಶ್ ನಗರ ಇಸ್ತಾನ್‌ಬುಲ್‌ನ ಮೇಯರ್ ಎಕ್ರಮ್ ಇಮಾಮೊಗ್ಲು ಅವರ ಬಂಧನದ ವಿರುದ್ಧ ಜನರು ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಟರ್ಕಿ ಪ್ರತಿಭಟನೆ
ಟರ್ಕಿ ಪ್ರತಿಭಟನೆAFP
Updated on

ಟರ್ಕಿಯಲ್ಲಿ ಜನರು ಮತ್ತೆ ಬೀದಿಗಿಳಿದಿದ್ದಾರೆ. ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (CHP) ನಾಯಕ, ಟರ್ಕಿಶ್ ನಗರ ಇಸ್ತಾನ್‌ಬುಲ್‌ನ ಮೇಯರ್ ಎಕ್ರಮ್ ಇಮಾಮೊಗ್ಲು ಅವರ ಬಂಧನದ ವಿರುದ್ಧ ಜನರು ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳನ್ನು ತಡೆಯಲು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಸರ್ಕಾರ ತಿಣುಕಾಡುತ್ತಿದೆ.

ದೇಶದ ಅನೇಕ ಸ್ಥಳಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲಾಗಿದೆ ಎಂಬ ವರದಿಗಳಿವೆ. ಕೆಲವು ಮಾಧ್ಯಮ ವರದಿಗಳು ಸಾಮಾಜಿಕ ಕೂಟಗಳ ಮೇಲಿನ ನಿರ್ಬಂಧಗಳ ಬಗ್ಗೆಯೂ ಮಾತನಾಡುತ್ತಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಯಲು ಮೆಟ್ರೋ ನಿಲ್ದಾಣಗಳನ್ನು ಸಹ ಮುಚ್ಚಲಾಗಿದೆ. ಪ್ರತಿಭಟನೆಗಳನ್ನು ವಿಫಲಗೊಳಿಸಲು, ನಗರದಲ್ಲಿ ನಾಲ್ಕು ದಿನಗಳವರೆಗೆ ಪ್ರದರ್ಶನಗಳ ಮೇಲೆ ನಿಷೇಧ ಹೇರಲಾಗಿದೆ.

ನಿಷೇಧದ ಹೊರತಾಗಿಯೂ, ಇಸ್ತಾನ್‌ಬುಲ್‌ನ ಪೊಲೀಸ್ ಪ್ರಧಾನ ಕಚೇರಿ, ನಗರ ಸಭಾಂಗಣ ಮತ್ತು ಇಮಾಮೊಗ್ಲು ಅವರ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (CHP) ಯ ಪ್ರಧಾನ ಕಚೇರಿಯ ಹೊರಗೆ ಮೂರನೇ ದಿನವೂ ಲಕ್ಷಾಂತರ ಜನರು ಜಮಾಯಿಸಿದ್ದಾರೆ. ಇಮಾಮೊಗ್ಲು ವಿರುದ್ಧದ ಕ್ರಮವನ್ನು ಕಾನೂನುಬಾಹಿರ ಮತ್ತು ಆಧಾರರಹಿತ ಎಂದು ಪ್ರತಿಭಟನಾಕಾರರು ಬಣ್ಣಿಸಿದ್ದಾರೆ. ಇಸ್ತಾನ್‌ಬುಲ್ ಮೇಯರ್ ಬಂಧನವು ಟರ್ಕಿಯಲ್ಲಿ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗಿದೆ. ಇದು ಪ್ರಜಾಪ್ರಭುತ್ವವಲ್ಲ, ಬದಲಾಗಿ ಪ್ರಜಾಪ್ರಭುತ್ವದ ನೆಪ. ಜನರು ಇದಕ್ಕೆ ಅರ್ಹರಲ್ಲ. ನಾವು ಖಂಡಿತವಾಗಿಯೂ ಅಸಮಾಧಾನಗೊಂಡಿದ್ದೇವೆ. ಮನುಷ್ಯರಾಗಿ ನಾವು ಅಸಮಾಧಾನಗೊಂಡಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.

ಮೂಲಗಳ ಪ್ರಕಾರ, ಮೂರು ವರ್ಷಗಳ ಬಳಿಕ ಟರ್ಕಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿ ಎಂದು ಎಕ್ರಮ್ ಇಮಾಮೊಗ್ಲು ಪರಿಗಣಿಸಲಾಗಿದೆ. ಹೀಗಾಗಿ ಇಮಾಮೊಗ್ಲು ವಿರುದ್ಧ ಹಲವು ಆರೋಪ ಹೊರಿಸಿ ಎರ್ಡೊಗನ್ ಸರ್ಕಾರ ಅವರನ್ನು ಬಂಧಿಸಿ ಜೈಲಿಗಟ್ಟಿತ್ತು. ಇದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ರಸ್ತೆಗಿಳಿದ ಲಕ್ಷಾಂತರ ಮಂದಿ ಪ್ರತಿಭಟನೆ ನಡೆಸಿ ಎರ್ಡೋಗನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಟರ್ಕಿ ಪ್ರತಿಭಟನೆ
ಪಾಕ್‌ನಲ್ಲಿ ಮತ್ತೆ ರಕ್ತದೋಕುಳಿ: Pak ಸೇನಾ ಕ್ಯಾಪ್ಟನ್ ಹತ್ಯೆ; ಎನ್‌ಕೌಂಟರ್‌ನಲ್ಲಿ 10 ಭಯೋತ್ಪಾದಕರು ಸಾವು!

ಎರ್ಡೋಗನ್ ಸರ್ಕಾರ ಪ್ರತಿಭಟನೆಗಳನ್ನು ಎದುರಿಸಬೇಕಾಗಿ ಬಂದಿರುವುದು ಇದೇ ಮೊದಲಲ್ಲ, ಅವರ ವಿರುದ್ಧ ಈ ಹಿಂದೆ ಯಾವಾಗ ಪ್ರತಿಭಟನೆಗಳು ನಡೆದಿವೆ. ಸದ್ಯ ಸುರಕ್ಷಿತ ಪ್ರದೇಶದಲ್ಲಿ ತಂಗಿರುವ ಎರ್ಡೋಗನ್ ಪ್ರಸ್ತುತ ನಡೆಯುತ್ತಿರುವ ಪ್ರತಿಪ್ರಭಟನೆಗಳನ್ನು ವಿರೋಧಿಸಿದ್ದಾರೆ. ನಗರ ಭಯೋತ್ಪಾದನೆಗೆ ಸರ್ಕಾರ ಬಗ್ಗಲ್ಲ ಎಂದು ಹೇಳಿದ್ದಾರೆ. ಇನ್ನು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿಗಳನ್ನು ಬಳಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com