ನನ್ನ ಕಾಲನ್ನು ಉಳಿಸುವುದಕ್ಕಾಗಿ ವೈದ್ಯರು ತುಂಬಾ ಪ್ರಯತ್ನಪಟ್ಟರು. ಆದರೆ ಕೆಲವೇ ದಿನಗಳಲ್ಲಿ ಸೋಂಕು ತಗಲಿದ ಕಾರಣ ಕಾಲನ್ನು ಬೇರ್ಪಡಿಸಲೇ ಬೇಕಾದ ಸ್ಥಿತಿ ಬಂತು. ಯಾಕೆ ಇಷ್ಟೊಂದು ಯೋಚನೆ ಮಾಡುತ್ತಿದ್ದೀರಾ? ಕಾಲನ್ನು ಬೇರ್ಪಡಿಸಿ, ಇದು ಪೂರ್ಣ ಗುಣವಾಗುವುದಿಲ್ಲ ಎಂದು ನನಗೆ ಗೊತ್ತು ಎಂದು ವೈದ್ಯರಲ್ಲಿ ನಾನೇ ಹೇಳಿದೆ. ಹಾಗೆ ನನ್ನ ಕಾಲನ್ನು ನನ್ನ ದೇಹದಿಂದ ಬೇರ್ಪಡಿಸಿದರು.