ಅನಿಶ್ಚಿತ ಮಳೆ, ಬೆಂಬಲ ಬೆಲೆ ಸರಿಯಾಗಿ ಸಿಗದಿರುವುದರಿಂದ ನಮಗೆ ಸಾಕಾಗಿ ಹೋಗಿದೆ.ಹಾಗಾಗಿ ಮೆಕ್ಕೆಜೋಳವನ್ನು ಬೆಳೆಯಲು ನಿರ್ಧರಿಸಿದೆ. ಈಗ ಸ್ಥಳೀಯ ಡೈರಿಗೆ ಮೆಕ್ಕೆಜೋಳವನ್ನು ಹಸುಗಳ ಮೇವಿಗೆ ನೀಡಿ ಎಕ್ರೆಗೆ 50,000 ಆದಾಯ ತರುವ ಭರವಸೆಯಿದೆ ಎನ್ನುತ್ತಾರೆ ಸುರೇಶ್. ಕಂಬಳ್ಳಿ ಗ್ರಾಮದ ರೈತ ಎಂ.ವೆಂಕಟೇಶ್ ಕೂಡ ಈ ಬೆಳೆ ಬೆಳೆಯುತ್ತಾರೆ. ಈ ಮುಂಚೆ ವಿಶೇಷವಾಗಿ ಬೇಸಿಗೆಯಲ್ಲಿ ಹಸುಗಳಿಗೆ ಮೇವು ಸಿಗುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ.