ರಾಜಕೀಯ

'ರಾಜಕಾರಣ ನಿಂತ ನೀರಲ್ಲ, ಮತ್ತೆ ಸಚಿವರಾಗಬೇಕೆಂದು ರಮೇಶ್ ಜಾರಕಿಹೊಳಿ ಪ್ರಯತ್ನ ತಪ್ಪಲ್ಲ': ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ

Sumana Upadhyaya

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸರ್ಕಾರ ಬೀಳಿಸುತ್ತಾರೆ, ರಾಜಕೀಯವಾಗಿ ಮಹತ್ತರ ಬೆಳವಣಿಗೆಗಳಾಗುತ್ತವೆ ಎಂಬುದೆಲ್ಲ ಊಹಾಪೋಹಗಳಷ್ಟೆ. ಆದರೆ ರಾಜಕೀಯದಲ್ಲಿ ಮನುಷ್ಯನಿಗೆ ಆಸೆ ಎಂಬುದಿರುತ್ತದೆ. ರಮೇಶ್ ಜಾರಕಿಹೊಳಿಯವರ ಸಚಿವ ಸ್ಥಾನ ಹೋಯಿತು, ಮತ್ತೆ ಸಚಿವರಾಗಬೇಕೆಂದು ಪ್ರಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ರಮೇಶ್ ಜಾರಕಿಹೊಳಿಯವರಿಗೆ ರಾಜಕೀಯವಾಗಿ ಏನೂ ಸಂಕಷ್ಟವಿಲ್ಲ. ರಾಜಕೀಯ ಅನ್ನೋದು ನಿಂತ ನೀರಲ್ಲ, ರಾಜಕೀಯ ವ್ಯಕ್ತಿ ಯಾವಾಗಲೂ ಸಕ್ರಿಯವಾಗಿದ್ದರಷ್ಟೆ ಸಂತೋಷ ಮತ್ತು ಚಲಾವಣೆಯಲ್ಲಿರುತ್ತಾರೆ. ರಾಜೀನಾಮೆ ನೀಡುತ್ತೇನೆ ಎಂದು ರಮೇಶ್ ಜಾರಕಿಹೊಳಿಯವರು ಹೇಳಿದಾಗ ಆ ನಿರ್ಧಾರ ಸಾಧುವಲ್ಲ, ಅದೆಲ್ಲ ಬೇಡ ಎಂದು ನಾವು ಹೇಳಿದ್ದೇವೆ ಎಂದರು.

SCROLL FOR NEXT