2015ರ ಕಾಲಚಕ್ರ ಪಂಚಾಂಗ ಬಿಡುಗಡೆ

ಹೆಸರಾಂತ ಜ್ಯೋತಿಷಿ ಎಸ್ ಕೆ ಜೈನ್ ಅವರು 2015ರ ಕಾಲಚಕ್ರ ಪಂಚಾಂಗವನ್ನು ಮಂಗಳವಾರ ಬಿಡುಗಡೆ ಮಾಡಿದರು.
ಕಾಲಚಕ್ರ ಪಂಚಾಂಗ ಬಿಡುಗಡೆ (ಸಂಗ್ರಹ ಚಿತ್ರ)
ಕಾಲಚಕ್ರ ಪಂಚಾಂಗ ಬಿಡುಗಡೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಹೆಸರಾಂತ ಜ್ಯೋತಿಷಿ ಎಸ್ ಕೆ ಜೈನ್ ಅವರು 2015ರ ಕಾಲಚಕ್ರ ಪಂಚಾಂಗವನ್ನು ಮಂಗಳವಾರ ಬಿಡುಗಡೆ ಮಾಡಿದರು.

ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಖ್ಯಾಶಾಸ್ತ್ರ ತಜ್ಞರಾದ ಕೆಎಂ ಬಸವರಾಜ್ ಗುರೂಜಿ ಮತ್ತು ನಟಿ ಮಂಜುಳಾ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಎಸ್ ಕೆ ಜೈನ್ ಅವರು 2015ರಲ್ಲಿ ಭಾರತದ ಹವಾಮಾನದಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿದ್ದು, ಬಿರುಬೇಸಿಗೆ ಸಂಭವಿಸಲಿದೆ ಎಂದು ಹೇಳಿದರು.

ಮಾರ್ಚ್ 20, ಏಪ್ರಿಲ್ 4 ಮತ್ತು ಸೆಪ್ಟೆಂಬರ್ 13ರಂದು ಸಂಭವಿಸುವ 3 ಗ್ರಹಣಗಳು ಹವಮಾನದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಈ ಸಮಯದಲ್ಲಿ ಯುದ್ಧ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು, ಅಧಿಕಾರಕ್ಕಾಗಿ ಕದನ ಸಂಭವಿಸಿ ಪ್ರಾಣನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಜೈನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com