ಚೈತ್ರ ನವರಾತ್ರಿಗೂ ಅಯೋಧ್ಯೆಗೂ ಶ್ರೀ ರಾಮ ಜನ್ಮದ ನಂಟು ಮಾತ್ರವಲ್ಲದೇ, ಮತ್ತೊಂದು ಹಿನ್ನೆಲೆಯೂ ಇದೆ. ಅಯೋದ್ಯೆಯನ್ನು ಧ್ರುವಸಿಂಧು ಎಂಬ ಮಹಾರಾಜ ಆಳುತ್ತಿರುತ್ತಾನೆ. ಆತನಿಗೆ ಇಬ್ಬರು ಪತ್ನಿಯರು, ಮೊದಲ ಪತ್ನಿ ಮನೋರಮೆಯ ಮಗ ಸುದರ್ಶನ, ಎರಡನೇ ಪತ್ನಿ ಲೀಲಾವತಿಯ ಮಗ ಶತ್ರುಜಿತ್. ಧ್ರುವಸಿಂಹ ಬೇಟೆಯಾಡುವಾಗ ಅಕಾಲ ಮೃತ್ಯುವಿಗೆ ತುತ್ತಾಗುತ್ತಾನೆ. ಸಿಂಹಾಸನಾಧಿಕಾರಕ್ಕೆ ಇಬ್ಬರು ಪತ್ನಿಯರ ಮಕ್ಕಳ ನಡುವೆ ಪೈಪೋಟಿ ನಡೆಯುತ್ತದೆ. ಇದಕ್ಕಾಗಿ ಯುದ್ದವೂ ನಡೆಯುತ್ತದೆ. ಯುದ್ಧದಲ್ಲಿ ಸುದರ್ಶನ ಸೋತಿದ್ದರಿಂದ ಆತ ತನ್ನ ತಾಯಿ ಹಾಗೂ ಸೇವಕನೊಡನೆ. ಭರದ್ವಾಜ ಋಷಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ಸುದರ್ಶನ ಆಶ್ರಮದಲ್ಲಿರುವವರೊಬ್ಬರು ಹೇಳಿದ ಶಬ್ದವನ್ನು ತಪ್ಪಾಗಿ ಕೇಳಿಸಿಕೊಂಡು ಅದನ್ನೇ ಪದೇ ಪದೇ ಹೇಳಲು ಪ್ರಾರಂಭಿಸುತ್ತಾನೆ. ಅದು ಕ್ಲೀಂ ಎಂಬ ಶಬ್ದವಾಗಿದ್ದು, ದೇವಿಯ ಉಪಾಸನೆ ವೇಳೆ ಹೇಳಿಕೊಳ್ಳುವ ಬೀಜಾಕ್ಷರವಾಗಿರುತ್ತದೆ. ಹೀಗೆ ಸುದರ್ಶನ ತನಗೆ ಅರಿವಿಲ್ಲದಂತೆಯೇ ಕ್ಲೀಂ ಎಂಬ ಬೀಜಾಕ್ಷರ ಹೇಳುತ್ತಿದ್ದರಿಂದ ಆದಿ ಪರಾಶಕ್ತಿಯು ಸಂತುಷ್ಟಗೊಂಡು ಆತನಿಗೆ ಮರಳಿ ಕೋಲಸ ದೇಶ ಸಿಕ್ಕಿ ರಾಜನಾಗುತ್ತಾನೆ. ದೇವಿಯು ಕೃಪೆಯಿಂದ ತಾನು ಮತ್ತೆ ರಾಜನಾಗಿದ್ದರಿಂದ ದೇವಿಯನ್ನು 9 ದಿನಗಳ ಕಾಲ ಆರಾಧಿಸುತ್ತಾನೆ. ಆ ಆರಾಧನೆಯೇ ನವರಾತ್ರಿಯಾಗಿ ಆಚರಿಸಲ್ಪಡುತ್ತಿದೆ ಎಂಬುದು ಚೈತ್ರ ಮಾಸದ ನವರಾತ್ರಿಯ ಪೌರಾಣಿಕ ಹಿನ್ನೆಲೆಯಾಗಿದೆ.