ಒಂಟಿ ಕಾಲಿನಲ್ಲಿ ತಪಸ್ಸು ಮಾಡುವುದಕ್ಕೂ ಹಲವು ಮಹತ್ವಗಳಿದ್ದು, ಜೀವನದಲ್ಲಿ ಒಂದೇ ಗುರಿ, ಒಬ್ಬನೇ ಗುರು, ಒಂದೇ ಮಂತ್ರವನ್ನು ಅನುಸರಿಸಿ ನಡೆದರೆ ಯಶಸ್ಸು ಸಿಗುತ್ತದೆ ಎಂಬುದು ಒಂಟಿ ಕಾಲು ತಪಸ್ಸಿನ ಗೂಢಾರ್ಥ ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ ಪಾರ್ವತಿ ಒಂಟಿ ಕಾಲಿನ ಮೇಲೆ ನಿಂತು ಶಿವನನ್ನು ಕುರಿತು ತಪಸ್ಸು ಮಾಡಿದ್ದರಿಂದ ಶಿವ ಪಾರ್ವತಿಗೆ ಒಲಿದ ಎಂಬ ನಂಬಿಕೆಯೂ ಇದೆ. ಕನ್ಯಾಕುಮಾರಿ ಪ್ರದೇಶ ದೇವಿ ಪಾರ್ವತಿಯ ತಪಸ್ಸಿಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಸ್ವಾಮಿ ವಿವೇಕಾನಂದರ ತಪಸ್ಸಿಗೂ ನೆರವಾಯಿತು, ಕನ್ಯಾಕುಮಾರಿಯಲ್ಲಿ ತಪಸ್ಸು ಮಾಡಿದ ನಂತರ ವಿವೇಕಾನಂದರಲ್ಲಿದ್ದ ಶಕ್ತಿ ಮತ್ತಷ್ಟು ಹೆಚ್ಚಾಯಿತು ಎಂದರೂ ಬಹುಶಃ ತಪ್ಪಾಗಲಾರದು.