ಪ್ರದೋಷ ವ್ರತಾಚರಣೆ ಶಿವ ಹಾಗೂ ಪಾರ್ವತಿ ದೇವತೆಗಳ ಉಪಾಸನೆಗೆ ಸಂಬಂಧಿಸಿದ್ದಾಗಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರದೋಷ ದಿನದಂದು ಉಪವಾಸವಿದ್ದು, ಶಿವನ ದೇವಾಲಯದಲ್ಲಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಜಪವನ್ನು 108 ಬಾರು ಜಪಿಸಿದರೆ, ಇಷ್ಟಾರ್ಥಗಳು ನೆರವೇರಿ, ಮನಃಶಾಂತಿ ಪಡೆಯಬಹುದೆಂಬ ನಂಬಿಕೆ ಇದೆ.