ಇನ್ನು ಈ ದೇವಾಲಯವನ್ನು ಭೂತಗಳು ನಿರ್ಮಿಸಿದ್ದರಿಂದ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲವೇ ಎಂಬ ಪ್ರಶ್ನೆಗೂ ಗ್ರಾಮಸ್ಥರೇ ಉತ್ತರಿಸಿದ್ದು, ಭೂತಗಳು ನಿರ್ಮಿಸಿರುವ ದೇವಾಲಯದಿಂದ ಯಾವುದೇ ಸಮಸ್ಯೆಗಳು ಇಲ್ಲ. ಅದರಿಂದ ನಮಗೆ ಒಳ್ಳೆಯದೇ ಆಗಿದೆ. ಅತಿವೃಷ್ಟಿ-ಅನಾವೃಷ್ಟಿಯ ಸಂದರ್ಭದಲ್ಲಿ ಬೇರೆ ಊರಿನ ರೈತರೆಲ್ಲಾ ಸಮಸ್ಯೆ, ತೀವ್ರ ಸಂಕಷ್ಟ ಎದುರಿಸಿದರೆ ಈ ದೇವಾಲಯದ ಪ್ರಭಾವದಿಂದ ನಮಗೆ ಅಂತಹ ಸಮಸ್ಯೆಗಳು ಎದುರಾಗಿಲ್ಲ. ದೇವಾಲಯ ರೈತರನ್ನು, ಗ್ರಾಮಸ್ಥರನ್ನು ಸಂಕಷ್ಟದ ಪರಿಸ್ಥಿತಿಯಿಂದ ಕಾಪಾಡುತ್ತಿದೆ ಎಂದೇ ಈ ಗ್ರಾಮಸ್ಥರು ನಂಬಿ ಅತ್ಯಂತ ಭಕ್ತಿಪೂರ್ವಕವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.