ಶಿರಸಿಯ ಹಳೇ ಮನೆಯಲ್ಲಿ ಬಾಲ್ಯದ ನವರಾತ್ರಿ ಸಂಭ್ರಮ
ಶಿರಸಿ ನಮ್ಮೂರು. ಕೆಲವೆಡೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸಿ, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾರಾಯಣ,ಮಾಡಿಸುತ್ತಿದ್ದರು. ತಂದೆ ಶಾರದಾ ಪೂಜೆಯ ದಿನ ನಮ್ಮೆಲ್ಲ ಪುಸ್ತಕಗಳನ್ನು ದೇವರ ಕೊನೆಯಲ್ಲಿ ಜೋಡಿಸಿಡಲು ಹೇಳುತ್ತಿದ್ದರು.
Published: 15th October 2021 06:29 PM | Last Updated: 16th October 2021 02:34 PM | A+A A-

ಹುಲಿವೇಷ, ಡೊಳ್ಳು ಕುಣಿತ, ಹೆಜ್ಜೆ ಕುಣಿತ
ಶಿರಸಿ ನಮ್ಮೂರು. ಕೆಲವೆಡೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸಿ, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾರಾಯಣ, ಮಾಡಿಸುತ್ತಿದ್ದರು. ತಂದೆ ಶಾರದಾ ಪೂಜೆಯ ದಿನ ನಮ್ಮೆಲ್ಲ ಪುಸ್ತಕಗಳನ್ನು ದೇವರ ಕೊನೆಯಲ್ಲಿ ಜೋಡಿಸಿಡಲು ಹೇಳುತ್ತಿದ್ದರು, ಆ ದಿನ ದೇವರಿಗೆ ಆರತಿ ಬೆಳಗಿ ನಮ್ಮ ಪುಸ್ತಕಕ್ಕೂ ಆರತಿ ಮಾಡುವರು. ಮತ್ತೆ ನಮಗೆ ಪುಸ್ತಕ ಸಿಗುವುದು ಮಾರನೇ ದಿನ. ರಾತ್ರಿಯೆಲ್ಲಾ ದೇವರು ಪುಸ್ತಕ ಮುಟ್ಟಿ ನಮಗೆ ಆಶೀರ್ವದಿಸಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಬರಲು ಸಹಾಯ ಮಾಡುವನು ಎಂದು ತಂದೆ ಕಥೆ ಹೇಳುತ್ತಿದ್ದರು. ಆಯುಧ ಪೂಜೆಯ ದಿನ ಅಮ್ಮ ತನ್ನ ಹೊಲಿಗೆ ಯಂತ್ರ, ಅಡುಗೆ ಮನೆ ಇತ್ಯಾದಿಗಳನ್ನು ಶುಚಿಗೊಳಿಸಿ ಪೂಜೆಗೆ ಅಣಿಯಾಗಿಸಿದರೆ, ಅಪ್ಪ ದೂರದರ್ಶನ, ತಂಪು ಪೆಟ್ಟಿಗೆ, ಕಪಾಟು ಇತ್ಯಾದಿ ಮನೆಯ ಸಾಮಗ್ರಿಗಳನ್ನು ಸ್ವಚ್ಛವಾಗಿ ಒರೆಸಿ, ನಂತರ ಆರತಿ ಮಾಡುತ್ತಿದ್ದರು.ಮನೆಯಲ್ಲಿ ಸಿಹಿಯೂಟ ಮಾಡಿ ಉಣ್ಣುತ್ತಿದ್ದೆವು.
ಉಡುಪಿ ಕುಂದಾಪುರ ಪ್ರದೇಶದಲ್ಲಿ ನವರಾತ್ರಿಯ ಹೊತ್ತಿನಲ್ಲಿ ವಿವಿಧ ವೇಷ ಧರಿಸಿ ಮನೆಮನೆಗೆ ತಿರುಗುವ ಕಲಾವಿದರ ಬಳಗವೇ ಆ ದಿನಗಳಲ್ಲಿ ಇರುತ್ತಿತ್ತು.ನಾವು ಮಕ್ಕಳು ನಿಜವಾಗಿಯೂ ರಾವಣ ಬಂದಿದ್ದಾನೆ,ಕಂಸ ಬಂದಿದ್ದಾನೆ ನಮ್ಮನ್ನು ಕರೆದುಕೊಂಡು ಹೋಗುತ್ತಾನೆ, ಬಕಾಸುರ ತಿಂದು ಬಿಡುತ್ತಾನೆ ಎಂದೆಣಿಸಿ ಅಳುತ್ತ ಕುಳಿತು ವೇಷ ನೋಡಲು ಹೆದರುತ್ತಿದ್ದೆವು. ವೇಷಗಳು ನರ್ತಿಸುವಾಗ ಅಮ್ಮ, ಅತ್ತೆಯಂದಿರು ಬಾ ಎಂದು ಎಳೆದುಕೊಂಡು ಹೋಗಿ ತೋರಿಸುತ್ತಿದ್ದರು. ಯಕ್ಷಗಾನ, ಹೂವಿ
ಚಿಕ್ಕಂದಿನಲ್ಲಿ ಅಪ್ಪನ ಸಂಬಂಧಿಯೊಬ್ಬರು ದಾಂಡೇಲಿಯಲ್ಲಿದ್ದರು. ಅವರ ಆಮಂತ್ರಣದ ಮೇರೆಗೆ ಅಲ್ಲಿಗೆ ನವರಾತ್ರಿಯ ರಜಾ ದಿನಗಳಲ್ಲಿ ಹೋಗಿದ್ದೆವು. ಅಲ್ಲಿ ದೊಡ್ಡ ರಾವಣನನ್ನು(ಹುಲ್ಲು, ಕಾಗದ ಇತ್ಯಾದಿಗಳಿಂದ) ತಯಾರಿಸಿ, ನಂತರ ಬಿಲ್ಲಿಗೆ ಬೆಂಕಿ ಹಚ್ಚಿ, ಬಿಲ್ಲಿನಿಂದ ಹೊಡೆಯುವ ವಾಡಿಕೆಯನ್ನು ನೋಡಿದ್ದೆವು. ಈ ಪದ್ಧತಿ ಉತ್ತರ ಭಾರತದ ಹಲವೆಡೆ ಆಚರಣೆ ಆಗುತ್ತದೆ ಎಂದೂ ಕೇಳಿದ್ದೇನೆ. ದೊಡ್ಡ ರಾವಣನ್ನು ನೋಡಿ ಹೆದರಿದ ನಾವು ರಾಮ ಬಂದು ಅವನನ್ನು ಹೊಡೆದ ಎಂದು ನೋಡಿ ಖುಷಿ ಪಟ್ಟಿದ್ದೆವು. ಕೆಟ್ಟವರನ್ನು ಹೊಡೆಯಲು ದೇವರು ಬರುವನು, ಒಳ್ಳೆಯವರಿಗೆ ಯಾವಾಗಲೂ ಜಯ ಎಂದೆಲ್ಲ ಅಮ್ಮ ಕಥೆ ಹೇಳಿದ್ದಳು.
ನವರಾತ್ರಿಯ ದಿನಗಳಲ್ಲಿ ಗದ್ದೆಯಲ್ಲಿ ಭತ್ತದ ಕೊಯ್ಲು ನಡೆಯುತ್ತಿರುತ್ತದೆ. ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. 'ಹೊಸತು' ಎಂಬ ಶೀರ್ಷಿಕೆಯಲ್ಲಿ ಈ ತೆನೆಗಳನ್ನು ತಂದು ಮನೆಯಲ್ಲಿ ಸುಖ,ಸಮೃದ್ಧಿ ನೆಲೆಸಲಿ ಎಂಬ ಭಾವದಿಂದ ಪೂಜಿಸಿ, ಮನೆಯಲ್ಲಿ ಅಕ್ಕಿ ಹಾಕಿಡುವ ಮಡಕೆ,ಬೆಳ್ಳಿ, ಬಂಗಾರ, ಇತ್ಯಾದಿಗಳಿಗೆ ಅವುಗಳನ್ನು ಕಟ್ಟಿ, ಹೊಸ ಭತ್ತದ ಅಕ್ಕಿಯಿಂದ ಅನ್ನ, ಪಾಯಸ ಮಾಡಿ ಆ ದಿನ ಹಬ್ಬದೂಟ ಮಾಡುವ ಕಾರ್ಯಕ್ರಮವಿರುತ್ತದೆ.
ವೇಷ ಹಾಕುವ ಕಲಾವಿದರು
ಈಗ ಕಾಲ ಬದಲಾಗಿದೆ.ಎಲ್ಲ ತರಾತುರಿಯಲ್ಲಿ ಸಾಗಬೇಕು.ವೇಷ ಹಾಕಿಕೊಂಡು ಮನೆಮನೆಗೆ ಬಂದರೆ ಅವರಿಗೆ ನೀಡುವ ಸಣ್ಣ ಸಂಭಾವನೆ, ಅವರ ಜೀವನ ಸಾಗುವುದೇ? ಅದಕ್ಕಾಗಿ ಹೊಟ್ಟೆಹೊರೆಯಲು ವೇಷ ಹಾಕುವ ಕಲಾವಿದರು, ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ತಮ್ಮ ಕಲೆಯನ್ನು ಮುಂದುವರಿಸಬೇಕೆಂದು ಅಪೇಕ್ಷಿಸಿ ತಮ್ಮ ಉದ್ಯೋಗ ತೊರೆದು ಯಕ್ಷಗಾನ ಗೊಂಬೆಯಾಟ ನಡೆಸುವ ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತರವರು ನವರಾತ್ರಿಯ ಸಮಯದಲ್ಲಿ ಕುಂದಾಪುರದ ವೆಂಕಟರಮಣ ದೇವಸ್ಥಾನದಲ್ಲಿ ಯಕ್ಷಗಾನ ಗೊಂಬೆಯಾಟ ಪ್ರದರ್ಶನವನ್ನು ನೀಡುತ್ತಾರೆ. ಅದನ್ನು ನೋಡಲು ೧೦೦-೨೦೦ ಜನ ಸೇರಿ ಮಕ್ಕಳು, ಹಿರಿಯರು ಎಲ್ಲರೂ ಬಹಳ ಖುಷಿ ಪಡುತ್ತಾರೆ.