ಹುಲಿವೇಷ, ಡೊಳ್ಳು ಕುಣಿತ, ಹೆಜ್ಜೆ ಕುಣಿತ
ವೇಷ ಹಾಕುವ ಕಲಾವಿದರು
ಈಗ ಕಾಲ ಬದಲಾಗಿದೆ.ಎಲ್ಲ ತರಾತುರಿಯಲ್ಲಿ ಸಾಗಬೇಕು.ವೇಷ ಹಾಕಿಕೊಂಡು ಮನೆಮನೆಗೆ ಬಂದರೆ ಅವರಿಗೆ ನೀಡುವ ಸಣ್ಣ ಸಂಭಾವನೆ, ಅವರ ಜೀವನ ಸಾಗುವುದೇ? ಅದಕ್ಕಾಗಿ ಹೊಟ್ಟೆಹೊರೆಯಲು ವೇಷ ಹಾಕುವ ಕಲಾವಿದರು, ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ತಮ್ಮ ಕಲೆಯನ್ನು ಮುಂದುವರಿಸಬೇಕೆಂದು ಅಪೇಕ್ಷಿಸಿ ತಮ್ಮ ಉದ್ಯೋಗ ತೊರೆದು ಯಕ್ಷಗಾನ ಗೊಂಬೆಯಾಟ ನಡೆಸುವ ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತರವರು ನವರಾತ್ರಿಯ ಸಮಯದಲ್ಲಿ ಕುಂದಾಪುರದ ವೆಂಕಟರಮಣ ದೇವಸ್ಥಾನದಲ್ಲಿ ಯಕ್ಷಗಾನ ಗೊಂಬೆಯಾಟ ಪ್ರದರ್ಶನವನ್ನು ನೀಡುತ್ತಾರೆ. ಅದನ್ನು ನೋಡಲು ೧೦೦-೨೦೦ ಜನ ಸೇರಿ ಮಕ್ಕಳು, ಹಿರಿಯರು ಎಲ್ಲರೂ ಬಹಳ ಖುಷಿ ಪಡುತ್ತಾರೆ.
Advertisement