

ಮಹಾಶಿವರಾತ್ರಿ ಹಬ್ಬದಂದು ಶಿವನ ಆರಾಧನೆಯೊಂದಿಗೆ, ವಿಶೇಷವಾಗಿ ಕೇರಳದಂತಹ ಸ್ಥಳಗಳಲ್ಲಿ ನದಿ ತೀರದಲ್ಲಿ ಅಗಲಿದ ಪಿತೃಗಳಿಗೆ 'ಬಲಿ ತರ್ಪಣ' (ಪಿತೃ ತರ್ಪಣ) ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಶಿವರಾತ್ರಿ ಬಲಿ ಎಂದರೆ ಕುಂಭ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಆಚರಿಸಲಾಗುವ ಮಹಾ ಶಿವರಾತ್ರಿಯ ಸಮಯದಲ್ಲಿ ಶಿವ ದೇವಾಲಯಗಳು ಮತ್ತು ನದಿ ದಂಡೆಗಳಲ್ಲಿ ಪೂರ್ವಜರಿಗೆ ಬಲಿದಾನ ಮಾಡುವ ವಿಧಾನವಾಗಿದೆ.
ಕೇರಳದಲ್ಲಿ ಪೂರ್ವಜರಿಗೆ ಬಲಿ ತರ್ಪಣ ಸಲ್ಲಿಸಲು ಪ್ರಸಿದ್ಧವಾದ ಪ್ರಮುಖ ಕೇಂದ್ರಗಳೆಂದರೆ ಆಲುವ ಮಣಪ್ಪುರಂ, ತಿರುವಳ್ಳಂ ಪರಶುರಾಮ ದೇವಸ್ಥಾನ, ವರ್ಕಳ ಪಾಪನಾಶಂ, ತಿರುನವಾಯ ನವಮುಕುಂದ ದೇವಸ್ಥಾನ, ತಿರುನೆಲ್ಲಿ ಪಾಪನಾಶಿನಿ ತೀರ್ಥಂ ಮತ್ತು ಕೋಝಿಕ್ಕೋಡ್ ರಕ್ಕಕಲ್ ಕಡಪ್ಪುರಂ ಗಳಲ್ಲಿ ಬಲಿ ತರ್ಪಣ ಕಾರ್ಯ ನೆರವೇರಿಸಲಾಗುತ್ತದೆ.
ಇದರ ಜೊತೆಗೆ, ಪಯ್ಯಂಬಲಂ ಬೀಚ್, ಪಾಲಕ್ಕಾಡ್ ತಿರುವಿಲ್ವಾಮಲ ಮತ್ತು ಕೊಲ್ಲಂ ಮುನೀಶ್ವರನ್ ದೇವಾಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುತ್ತದೆ. ಪೂರ್ವಜರ ಆಶೀರ್ವಾದ ಪಡೆಯಲು ಮತ್ತು ಮೋಕ್ಷ ಪಡೆಯಲು ಈ ಫೂಜೆ ನೆರವೇರಿಸಲಾಗುತ್ತದೆ.
ಬಲಿ ತರ್ಪಣ ಪಿತೃಗಳನ್ನು ಸಮಾಧಾನಪಡಿಸುವ ಧಾರ್ಮಿಕ ಆಚರಣೆಯಾಗಿದೆ. ಮುಂಜಾನೆ ಸ್ನಾನ ಮಾಡಿ, ಶ್ವೇತ ವಸ್ತ್ರ ಧರಿಸಿ, ಕಪ್ಪು ಎಳ್ಳು ಮತ್ತು ನೀರನ್ನು ಅರ್ಪಿಸಲಾಗುತ್ತದೆ.
ಬಲಿತಾರ್ಪಣ ಸಮಯ: ಫೆಬ್ರವರಿ 15 ಮತ್ತು 16 ರ ನಡುವಿನ ಅಮಾವಾಸ್ಯೆ, ಮುಖ್ಯವಾಗಿ ಸೂರ್ಯೋದಯದ ನಂತರ ಮಾಡಬಹುದಾಗಿದೆ.
ಹಿಂದಿನ ದಿನ (ತ್ರಯೋದಶಿ)ಯಂದು ಉಪವಾಸ ಪ್ರಾರಂಭವಾಗುತ್ತದೆ. ಅನ್ನ ಸೇವಿಸುವುದನ್ನು ತಪ್ಪಿಸಿ ಲಘು ಆಹಾರ ತೆಗೆದುಕೊಳ್ಳಬಹುದಾಗಿದೆ. ಶಿವರಾತ್ರಿ ದಿನ ಭಕ್ತರು ಶಿವ ದೇವಾಲಯಕ್ಕೆ ಭೇಟಿ ನೀಡಲು ಮತ್ತು 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸುತ್ತಾ ರಾತ್ರಿಯಿಡೀ ನಿದ್ದೆ ಮಾಡದೆ ಜಾಗರಣೆ ಮಾಡುವುದಾಗಿದೆ.
ಶಿವರಾತ್ರಿಯಂದು ಶಿವಲಿಂಗವನ್ನು ಹಾಲು, ಜೇನುತುಪ್ಪ ಮತ್ತು ವಿಭೂತಿಯಿಂದ ಹಾಗೂ ಬಿಲ್ವ ಪತ್ರೆಯಿಂದ ಅಭಿಷೇಕ ಮಾಡಲಾಗುತ್ತದೆ.
ಮರುದಿನ ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿ ಪವಿತ್ರ ನೀರನ್ನು ಅರ್ಪಿಸುವ ಮೂಲಕ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ.
ಮಹಾಶಿವರಾತ್ರಿ 2026 ಫೆಬ್ರವರಿ 15 ರ ಭಾನುವಾರದಂದು ಬರುತ್ತದೆ. ಪೂರ್ವಜರ ಆಶೀರ್ವಾದವನ್ನು ಪಡೆಯಲು, ಪಾಪಗಳನ್ನು ನಾಶಮಾಡಲು ಮತ್ತು ಮನಸ್ಸಿನ ಶಾಂತಿಯನ್ನು ಪಡೆಯಲು ಲಕ್ಷಾಂತರ ಭಕ್ತರು ಈ ದಿನದಂದು ಶಿವರಾತ್ರಿ ಧ್ಯಾನ ಮತ್ತು ಉಪವಾಸ ಆಚರಿಸುತ್ತಾರೆ.
Source: samakalikamalayalam. com
Advertisement