ಬಿಗಿ ಭದ್ರತೆಯ ನಡುವೆ ವಿಧಾನಸೌಧದ ಮುಂಭಾಗ ಚಲನಚಿತ್ರೋತ್ಸವದ ಉದ್ಘಾಟನೆ

೮ನೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆ ಇಂದು ವಿಧಾನಸೌಧದ ಮುಂಭಾಗ ಸಂಜೆ ೫:೩೦ ಕ್ಕೆ ನೆರವೇರಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ.
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ೮ನೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆ ಇಂದು ವಿಧಾನಸೌಧದ ಮುಂಭಾಗ ಸಂಜೆ ೫:೩೦ ಕ್ಕೆ ನೆರವೇರಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ.

ಮುಖಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಭಾ ಸದಸ್ಯೆ ಹಾಗೂ ಬಾಲಿವುಡ್ ನ ಹಿರಿಯ ಕಲಾವಿದೆ ಜಯಾ ಬಚ್ಚನ್ ಸಿನಿಮೋತ್ಸವದ ಉದ್ಘಾಟನೆ ನಡೆಸಲಿದ್ದಾರೆ.

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಮರಣ ಸಚಿಕೆ ಬಿಡುಗಡೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಅಶೋಕ್ ಅಮೃತ್ ರಾಜ್, ಡಿ ವೆಂಕಟೇಶ್. ಶಿವರಾಜ ಕುಮಾರ್ ಮತ್ತು ಸುದೀಪ್ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಮನವಿ

ವಿಧಾನಸೌಧದ ಸುತ್ತಮುತ್ತ ಬಿಗಿ ಭದ್ರತೆಯಿದ್ದು, ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸುವವರು ಕಡ್ಡಾಯವಾಗಿ ಆಹ್ವಾನ ಪತ್ರಿಕೆ ಮತ್ತು ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.

ಉದ್ಘಾಟನಾ ಸಮಾರಂಭದ ನಂತರ ಕನ್ನಡಿಗ ರಾಮಿರೆಡ್ಡಿ ನಿರ್ದೇಶನದ 'ತಿಥಿ' ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com