ಸಿನಿಮೋತ್ಸವ: ಹೊಸ ಅಲೆಯ ಸಿನಿಮಾಗಳು ಎಂಬ ವರ್ಗೀಕರಣ ಸಲ್ಲ ಎಂದ ಪಿ ಶೇಷಾದ್ರಿ

ಏಳನೇ ಬೆಂಗಳೂರು ಅಂತರಾಷ್ಟ್ರೀಯ
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಚಿತ್ರನಿರ್ದೇಶಕ ಮಂಸೋರೆ ಮತ್ತು ಪಿ ಶೇಷಾದ್ರಿ
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಚಿತ್ರನಿರ್ದೇಶಕ ಮಂಸೋರೆ ಮತ್ತು ಪಿ ಶೇಷಾದ್ರಿ

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಡಿಸೆಂಬರ್ ೧ ಸಿನೆಮಾದ ನಿರ್ದೇಶಕ ಪಿ ಶೇಷಾದ್ರಿ, ಸಿನೆಮಾಗಳನ್ನು ಕಲಾತ್ಮಕ ಸಿನೆಮಾಗಳು, ಹೊಸ ಅಲೆಯ ಸಿನೆಮಾಗಳು ಎಂದು ಕರೆಯುವುದು ಸರಿಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಿ ಶೇಷಾದ್ರಿ, ಕೆಲವು ಸಿನೆಮಾಗಳನ್ನು ಹೊಸ ಅಲೆಯ ಸಿನೆಮಾಗಳು, ಪರ್ಯಾಯ ಸಿನೆಮಾಗಳು, ಕಲಾತ್ಮಕ ಸಿನೆಮಾಗಳು ಎಂದು ಕರೆಯುವ ಹೊಸ ಬೆಳವಣಿಗೆ ಪ್ರಾರಂಭವಾಗಿದೆ. ಇದರಿಂದ ಕೆಲವು ನಿರ್ದೇಶಕರು ಅಸ್ಪೃಶ್ಯರಾಗಿದ್ದಾರೆ. ಎಲ್ಲ ಸಿನೆಮಾಗಳಲ್ಲು ಕಲೆ ಇದೆ. ಹೊಸ ಅಲೆ ಎಂಬ ಪದ ೭೦ ದಶಕದಲ್ಲಿ ಸರಿಯಿತ್ತೇನೊ, ಆದೆರೆ ಅದು ಈಗ ಅಪ್ರಸ್ತುತ ಎಂದಿದ್ದಾರೆ.

ಕಳೆದ ಗೋವಾ ಚಲನಚಿತ್ರೋತ್ಸವದಲ್ಲಿ ಬರೀ ಒಂದು ಕನ್ನಡ ಸಿನೆಮಾ ಪ್ರದರ್ಶನಗೊಂಡದಕ್ಕೆ ಬೇಸರ ವ್ಯಕ್ತಪಡಿಸಿದ ಶೇಷಾದ್ರಿ ಹೆಚ್ಚೆಚ್ಚು ಕನ್ನಡ ಚಲನಚಿತ್ರನಿರ್ದೇಶಕರು ತಮ್ಮ ಸಿನೆಮಾಗಳನ್ನು ಸಿನಿಮೋತ್ಸವಗಳಲ್ಲಿ ತೋರಿಸಬೇಕು ಎಂದರು.

'ಹರಿವು' ಕನ್ನಡ ಚಲನಚಿತ್ರದ ನಿರ್ದೇಶಕ ಮಂಜುನಾಥ್ ಎಸ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ತಮ್ಮ ಚಿತ್ರ ಪ್ರದರ್ಶನಗೊಂಡದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com