ಬ್ಯಾಂಕ್ ಮುಷ್ಕರ ಮುಂದೂಡಿಕೆ

ವೇತನ ಪರಿಷ್ಕರಣೆಗೆ ಆಗ್ರಹಿಸಿ ನೌಕರರ ಯೂನಿಯನ್ ಜ.21ರಿಂದ ಕರೆ ನೀಡಿದ್ದ ನಾಲ್ಕು...
ಬ್ಯಾಂಕ್ ಮುಷ್ಕರ ಮುಂದೂಡಿಕೆ
Updated on

ನವದೆಹಲಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ನೌಕರರ ಯೂನಿಯನ್ ಜ.21ರಿಂದ ಕರೆ ನೀಡಿದ್ದ ನಾಲ್ಕು ದಿನಗಳ ಬ್ಯಾಂಕ್ ಮುಷ್ಕರವನ್ನು ಸದ್ಯಕ್ಕೆ ಮುಂದೂಡಲಾಗಿದೆ.

ನೌಕರರ ಯೂನಿಯನ್ ಮುಂದಿಟ್ಟಿರುವ ಬೇಡಿಕೆಗೆ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಸರ್ಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೌಕರರ ಯೂನಿಯನ್‌ಗಳ ಒಕ್ಕೂಟವು ಶೇ.19.50ರಷ್ಟು ವೇತನ ಹೆಚ್ಚಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಸೋಮವಾರ ನಡೆದ ಸಭೆಯಲ್ಲಿ ಬ್ಯಾಂಕ್‌ಗಳ ಒಕ್ಕೂಟವು ವೇತನವನ್ನು ಶೇ.12.50ರಿಂದ ಶೇ.12.75ರಷ್ಟು ಹೆಚ್ಚಿಸಲು ಒಲವು ತೋರಿತ್ತು.

ಈ ಹಿನ್ನೆಲೆಯಲ್ಲಿ ನೌಕರರ ಒಕ್ಕೂಟವು ತನ್ನ ಪಟ್ಟು ಸಡಿಲಿಸಿದ್ದು, ಕನಿಷ್ಠ ಶೇ.16ರಷ್ಟಾದರೂ ಹೆಚ್ಚಳ ಮಾಡುವಂತೆ ಆಗ್ರಹಿಸಿದೆ. ಇವರ ಬೇಡಿಕೆ ಪರಿಗಣಿಸುವ ಸಂಬಂಧ ಬ್ಯಾಂಕ್‌ಗಳ ಒಕ್ಕೂಟ ಇನ್ನಷ್ಟು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಷ್ಕರ ಕೈಬಿಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com