ಸಂಗ್ರಹ ಚಿತ್ರ
ವಾಣಿಜ್ಯ
ಆಹಾರ ಧಾನ್ಯಗಳ ಬೆಲೆ ಕುಸಿತ
ತೊಗರಿ ಸೇರಿದಂತೆ ಬೇಳೆ ಕಾಳುಗಳ ಸಂಗ್ರಹದ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದ್ದು , ಒಂದೇ ದಿನದಲ್ಲಿ ಪ್ರತಿ ಕ್ವಿಂಟಲ್ ದರದಲ್ಲಿ...
ನವದೆಹಲಿ: ತೊಗರಿ ಸೇರಿದಂತೆ ಬೇಳೆ ಕಾಳುಗಳ ಸಂಗ್ರಹದ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದ್ದು , ಒಂದೇ ದಿನದಲ್ಲಿ ಪ್ರತಿ ಕ್ವಿಂಟಲ್ ದರದಲ್ಲಿ ರು.500ರಷ್ಟು ಕಡಿಮೆಯಾಗಿದೆ.
ದೆಹಲಿ ಮಾರುಕಟ್ಟೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ದೆಹಲಿಯಲ್ಲಿ ಉದ್ದಿನಬೇಳೆ ಕಳೆದ ತಿಂಗಳು ರು.9,900 ರಿಂದ ರು. 11 ಸಾವಿರ ಇದ್ದದ್ದು ಸೋಮವಾರ ರು.9,500 ರಿಂದ ರು.10,500ಕ್ಕೆ ಇಳಿಕೆಯಾಗಿದೆ.
ಹೆಸರುಬೇಳೆ ದರ ಪ್ರತಿ ಕ್ವಿಂಟಲ್ಗೆ ರು.100 ರಷ್ಟು ಕಡಿಮೆಯಾಗಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಪ್ರತಿ ಕೆಜಿಗೆ ರು.200ಕ್ಕೆ ಏರಿಕೆಯಾಗಿದೆ. ಕಳದ ವಾರದ ವರೆಗೆ ಅದರ ಬೆಲೆ ರು.185 ಆಗಿತ್ತು. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕರಾ ಉದ್ದಿನ ಬೇಳೆಗೆ ಸೋಮವಾರ ಪ್ರತಿ ಕೆಜಿಗೆ ರು.170 ಆಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ