-ಬೆಂಗಳೂರು ನಗರದ ಮಾಲಿನ್ಯ ಮತ್ತು ಪರಿಸರದ ಬಗ್ಗೆ ನಮಗೆ ಸಹ ಆತಂಕವಿದ್ದು ಉತ್ಪಾದನಾ ಘಟಕಗಳು ಇಲ್ಲಿಗೆ ಬಾರದಂತೆ ಪ್ರಯತ್ನಿಸುತ್ತಿದ್ದೇವೆ. ಉತ್ಪಾದನಾ ಘಟಕಗಳನ್ನು ಮಂಗಳೂರು, ಕೋಲಾರ, ವೇಮಗಲ್, ನರಸಾಪುರ, ವಸಂತನರಸಾಪುರ ಮತ್ತು ಯಾದಗಿರಿಗಳಿಗೆ ಹಂಚಿಕೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಬೆಂಗಳೂರಿನಲ್ಲಿ ಹೂಡಿಕೆ ಕೂಡ ಸುಲಭವಾಗಿಲ್ಲ. ಗ್ಲಾಕ್ಸೊಸ್ಮಿತ್ ಕ್ಲಿನ್ಸ್ ದೊಡ್ಡ ಹೂಡಿಕೆ ವೇಮಗಲ್ ನಲ್ಲಿ ಆಗುತ್ತಿದೆ. ಹೊಂಡಾ ನರಸಾಪುರದಲ್ಲಿ, ಕೋಲಾರ ಜಿಲ್ಲೆಗಳಲ್ಲಿ ಘಟಕ ತೆರೆಯುತ್ತಿದೆ. ಏಷಿಯನ್ ಪೈಂಟ್ಸ್ ಅಂಡ್ ಪೆಪ್ಸಿ ಮೈಸೂರಿಗೆ ಹೋಗಿವೆ. ಹಾವೆಲ್ಸ್ ತುಮಕೂರಿಗೆ ಹೋಗಿದೆ.