ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಮಂಡಿಸಿದ ಬಜೆಟ್ ನ ನಂತರ ಷೇರು ವಿನಿಮಯ ಮಾರುಕಟ್ಟೆಯ ವಹಿವಾಟಿನಲ್ಲಿ ಏರಿಕೆ ಕಂಡುಬಂದಿದೆ. ಮೂಲಭೂತ ಸೌಕರ್ಯ, ಉದ್ಯಮ,ಸಣ್ಣ ಉದ್ಯಮಗಳಲ್ಲಿ ತೆರಿಗೆ ಕಡಿತದ ಯೋಜನೆಗಳನ್ನು ಪ್ರಕಟಿಸಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಳವಾಗಿದೆ. ಮುಂಬೈಯ ಷೇರು ವಿನಿಮಯ ಮಾರುಕಟ್ಟೆ ತಜ್ಞರು ಕೂಡ ಒಟ್ಟು ದೇಶೀಯ ಉತ್ಪನ್ನದಲ್ಲಿ ವಿತ್ತೀಯ ಕೊರತೆಯನ್ನು 2017-18ರಲ್ಲಿ ಶೇಕಡಾ 3.2ರಲ್ಲಿ ನಿಲ್ಲಸುವುದು ಮತ್ತು 2018-19ರಲ್ಲಿ ಶೇಕಡಾ 3ಕ್ಕೆ ನಿಲ್ಲಿಸಲು ಸರ್ಕಾರ ನಿರ್ಧರಿಸಿರುವುದು ಏರಿಕೆಗೆ ಕಾರಣವಾಗಿದೆ.