ಊಹಿಸಲಾಗದ ಪರಿಸ್ಥಿತಿ ಊಹಿಸಲಾಗದ ತೀರ್ಮಾನಗಳನ್ನೂ ಹೊತ್ತು ತರುತ್ತದೆ. ಇಟಲಿಯ ದಕ್ಷಿಣಕ್ಕೆ ಮೆಡೀವಲ್ ವಿಲೇಜ್ ಒಂದಿದೆ ಸೆಲ್ಲಿಯ ಎನ್ನುವ ಹೆಸರೊತ್ತ ಈ ಗ್ರಾಮದ ಜನಸಂಖ್ಯೆ 18 ನೇ ಶತಮಾನದದಲ್ಲಿ ಇದ್ದ ಜನಸಂಖ್ಯೆಯ ಕೇವಲ ಹತ್ತು ಭಾಗ! ಇಲ್ಲಿನ ಮೇಯರ್ ' ನಮ್ಮೋರಲ್ಲಿ ಯಾರಿಗೂ ಸಾಯುವ ಹಕ್ಕಿಲ್ಲ !, ಸಾವನ್ನ ನಾವು ಒಪ್ಪಿಕೊಳ್ಳುವ ಸ್ಥಿತಿಯಲಿಲ್ಲ , ಉಳಿದಿರುವ ನಾವು ನಮ್ಮ ಹಳ್ಳಿಯನ್ನ ಉಳಿಸಬೇಕಿದೆ' ಎನ್ನುವ ಮುಚ್ಚಳಿಕೆ ಹೊರಡಿಸುತ್ತಾನೆ . ಇಂದೂ ನಾಳೆಯೋ ಎಂದು ದಿನ ಎಣಿಸುತ್ತಿರುವ ಬಹುತೇಕ ವೃದ್ದರು ಮೇಯರ್ ಮಾತಿಗೆ ' ಪ್ರಕೃತ್ತಿಗೆ ಸಾವಾಲು ಹಾಕುವ ಮುಚ್ಚಳಿಕೆ ಹೊರಡಿಸಿದ್ದೀಯಾ , ಸಾವನ್ನ ತಡೆಯಲು ಸಾಧ್ಯವೇ? 'ಎನ್ನುವ ಪ್ರಶ್ನೆ ಕೇಳಿದ್ದಾರೆ . ಮೇಯರ್ ಮುಚ್ಚಳಿಕೆ ಸಾವನ್ನ ತಡೆಯುವುದಿಲ್ಲ ನಿಜ . ತನ್ನೋರನ್ನ ಕಾಪಾಡಬೇಕು ಎನ್ನುವ ಕಿಚ್ಚು ಆ ಮುಚ್ಚಳಿಕೆ ತೋರಿಸುತ್ತಿದೆ . ಹಿರಿಯ ನಾಗರಿಕರಲ್ಲಿ ಇರುವ ಆ ಕಿಚ್ಚು ಯುವಕರಲಿಲ್ಲ . ನಗರದ ಆಕರ್ಷಣೆ , ಹಳ್ಳಿಯ ಕಷ್ಟದ ಬದುಕು , ಇಟಲಿಯ ಹಳ್ಳಿಯಲ್ಲಿ ಸಾಮಾನ್ಯವಾಗಿರುವ ಪೈರೇಟ್ ದಾಳಿಗಳು , ಭೂಕುಸಿತ , ಕಾಳ್ಗಿಚ್ಚು ಇವುಗಳಲ್ಲವ ಕಾರಣದಿಂದ ಇಟಲಿಯ ಯುವಜನತೆ ಹಳ್ಳಿಯಿಂದ ಗಾವುದ ದೂರ .