ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಅಂಕಿ ಅಂಶದ ಬಗ್ಗೆ ವಿರೋಧ ಪಕ್ಷ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಆಪಾದಿಸಿದರು.
ಈ ಹಿಂದೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿವಿಧ ಸುಧಾರಣಾ ಯೋಜನೆಗಳ ಕುರಿತು ಆರೋಪ ಮಾಡುತ್ತಿದ್ದವು. ಇಂದು ಉದ್ಯೋಗ ಸೃಷ್ಟಿಯ ಕುರಿತು ಆರೋಪಿಸುತ್ತಿವೆ. ಸುಳ್ಳು ಪ್ರಚಾರ ಮಾಡಲು ಜನರಿಗೆ ಯಾವುದಾದರೊಂದು ವಿಷಯ ಬೇಕು. ಆರ್ಥಿಕ ವಲಯದಿಂದ ಹೊರಗೆ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಬೆಳವಣಿಗೆಯಾಗಿದೆ ಎಂದಾದರೆ ಅಲ್ಲಿ ಉದ್ಯೋಗ ಸೃಷ್ಟಿಯಾಗಿರಲೇಬೇಕು ಎಂದರು.
ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯರನ್ನು ಪಾಕಿಸ್ತಾನ ಗುರಿಯಾಗಿಟ್ಟಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕಳೆದ ಕೆಲ ದಿನಗಳ ಹಿಂದೆ ನಮ್ಮ ಸೇನಾಪಡೆ ಗಡಿ ನಿಯಂತ್ರಣ ರೇಖೆ ಬಳಿ ನಿಯಂತ್ರಣ ಹೊಂದಿತ್ತು. ಪಾಕಿಸ್ತಾನ ಜೊತೆ ಸ್ನೇಹ ಬಾಂಧವ್ಯ ಬೆಳೆಸುವ ನಮ್ಮ ಪ್ರಯತ್ನಕ್ಕೆ ಪಠಾಣ್ ಕೋಟ್ ಅಥವಾ ಉರಿ ದಾಳಿಯಂತಹ ದಾಳಿಗಳಿಂದ ಪಾಕಿಸ್ತಾನ ಉತ್ತರ ಕೊಟ್ಟಿದೆ. ಶಾಂತಿ ಮಾತುಕತೆಗೆ ಮುಂದಾಗುವ ನಮ್ಮ ಪ್ರಯತ್ನವನ್ನು ಪಾಕಿಸ್ತಾನವೇ ದೂರವಿಡುತ್ತಿದೆ ಎಂದು ಹೇಳಿದರು.