ಕೆಲವು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೂಡಿಸ್ ರೇಟಿಂಗ್ ವಿಧಾನವನ್ನು ಟೀಕಿಸಿತ್ತು. ಮೂಡಿಸ್ ರೇಟಿಂಗ್ ವಿಧಾನ ಸಂಪೂರ್ಣ ತಪ್ಪು ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಸುದೀರ್ಘ ಪತ್ರ ಬರೆದಿದ್ದರು. ಅಲ್ಲದೆ ಆ ಪತ್ರದಲ್ಲಿ ರೇಟಿಂಗ್ ವಿಧಾನವನ್ನು ಪರಿಷ್ಕರಿಸುವಂತೆ ಮನವಿ ಮಾಡಿದ್ದರು ಎಂದು ಚಿದಂಬರಂ ಅವರು ಟಾಟಾ ಲಿಟರೇಚರ್ ಲೈವ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.