ಏರ್ ಸೆಲ್ ದಿವಾಳಿ : ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣಕ್ಕೆ ಅರ್ಜಿ

ಏರ್ ಸೆಲ್ ಕಂಪನಿ ಹಲವು ಸಂದರ್ಭಗಳಲ್ಲಿ ಹಣಕಾಸಿನ ತೊಂದರೆಗೊಳಗಾಗಿದ್ದು, ದಿವಾಳಿ ಎಂದು ಘೋಷಿಸಬೇಕೆಂದು ರಾಷ್ಟ್ರೀಯ ಕಂಪನಿ ಕಾನೂನುನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಎರ್ ಸೆಲ್ ಕಂಪನಿಯ (ಸಾಂದರ್ಭಿಕ ಚಿತ್ರ)
ಎರ್ ಸೆಲ್ ಕಂಪನಿಯ (ಸಾಂದರ್ಭಿಕ ಚಿತ್ರ)
Updated on

ಮುಂಬೈ: ಟಿ. ಅನಂದ್ ಕೃಷ್ಣನ್ ಮಾಲೀಕತ್ವದ ಏರ್ ಸೆಲ್ ಕಂಪನಿ ಹಲವು ಸಂದರ್ಭಗಳಲ್ಲಿ ಹಣಕಾಸಿನ ತೊಂದರೆಗೊಳಗಾಗಿದ್ದು, ದಿವಾಳಿ ಎಂದು ಘೋಷಿಸಬೇಕೆಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಬೃಹತ್ ಪ್ರಮಾಣದ ವ್ಯವಹಾರ ನಷ್ಠದಿಂದಾಗಿ ಕಂಪನಿ ಸಾಲ ಹೆಚ್ಚಾಗಿ ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಕಂಪನಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

ಏರ್ ಸೆಲ್ ಕಂಪನಿ ಜೊತೆಗೆ ಅದರ ಅಂಗಸಂಸ್ಥೆಗಳಾದ ಏರ್ ಸೆಲ್ ಸೆಲ್ಯೂಲರ್ ಮತ್ತು ಡಿಸ್ ನೆಟ್ ವೈರ್ ಲೆಸ್ ಸಂಸ್ಥೆಗಳನ್ನೂ ಕೂಡಾ ದಿವಾಳಿ ಎಂದು ಘೋಷಿಸಬೇಕೆಂದು ಒತ್ತಾಯಿಸಲಾಗಿದೆ.

ಮಲೇಷಿಯಾ ಮೂಲದ ಮಾಕ್ಸಿಸ್ ಕಂಪನಿ ಜೊತೆಗಿನ ಷೇರು ಮತ್ತು ಸಾಲದ ಕುರಿತಾದ ಒಪ್ಪಂದ ವಿಫಲವಾದ ನಂತರ ಏರ್ ಸೆಲ್ ಕಂಪನಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com