ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ವಿಶ್ವಬ್ಯಾಂಕ್ ನ ಜಾಗತಿಕ ಆರ್ಥಿಕ ನಿರೀಕ್ಷೆಯ ವರದಿ ತಯಾರಿಕ ವಿಭಾಗದ ನಿರ್ದೇಶಕ ಐಹ್ಯಾನ್ ಕೋಸ್ ಅವರು, ಪ್ರಸ್ತುತ ಭಾರತ ಕೈಗೊಳ್ಳುತ್ತಿರುವ ವಿತ್ತೀಯ ನೀತಿಗಳು ಆಶಾದಾಯಕವಾಗಿದೆ. ಭಾರತ ಗರಿಷ್ಠ ಪ್ರಮಾಣದ ಅಭಿವೃದ್ಧಿ ದರವನ್ನು ದಾಖಲು ಮಾಡುತ್ತಿದ್ದು, ವಿಶ್ವ ಆರ್ಥಿಕ ಮಾರುಕಟ್ಟೆಯಲ್ಲಿ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿದೆ. ಪ್ರಸ್ತುತ ಜಿಎಸ್ ಟಿ ಮತ್ತು ನೋಟು ನಿಷೇಧದಿಂದಾಗಿ ಭಾರತಕ್ಕೆ ಹಿನ್ನಡೆಯಾಗಿರಬಹುದು, ಆದರೆ ಸುದೀರ್ಘ ಸಮಯದಲ್ಲಿ ಭಾರತಕ್ಕೆ ಲಾಭವಾಗಲಿದೆ ಎಂದು ಹೇಳಿದ್ದಾರೆ.