ಅಂತೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಂಚನೆ ಪ್ರಕರಣ ವರದಿಯಾದ ಬಳಿಕ ಆರ್ಬಿಐ ಮೇಲ್ವಿಚಾರಣೆ ತಂಡ ಗಮನಿಸುತ್ತದೆ ಎಂಬ ಟೀಕೆಗೆ ಉತ್ತರಿಸಿದ ಅವರು, ವಿಸ್ತಾರವಾದ ಬ್ಯಾಂಕಿಂಗ್ ಕ್ಷೇತ್ರದ ಯಾವುದೋ ಒಂದು ಕಡೆ ವಂಚನೆ ನಡೆಯುತ್ತಿದೆ ಎಂದು ಮೊದಲೇ ಗೊತ್ತುಪಡಿಸಿ ನಿಯಂತ್ರಿಸುವುದು ಅಸಾಧ್ಯವಾಗಿದೆ ಎಂದರು. ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳ ನಿಯಂತ್ರಣ ವ್ಯವಸ್ಥೆ ಸರಿಸಮಾನವಾಗಿರಬೇಕು ಎಂದ ಪಟೇಲ್, ಸಾಧನೆಯ ಶ್ರೇಯ ಪಡೆಯಲು ಹಲವರು ಮುಂದೆ ಬರುತ್ತಾರೆ. ಆದರೆ ವೈಫಲ್ಯದ ಹೊಣೆ ಯಾರೂ ಹೊರುವುದಿಲ್ಲ ಎಂದು ಹೇಳಿದರು. ಅನುತ್ಪಾದಕ ಸಾಲದ (ಎನ್ಪಿಎ) ಪ್ರಮಾಣ ಹೆಚ್ಚುತ್ತಿರುವುದನ್ನು ಪ್ರಸ್ತಾವಿಸಿದ ಪಟೇಲ್, ಈ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.