ಭಾರತದ ಅತಿದೊಡ್ಡ ಕಾಫಿ ಸಂಸ್ಥೆಯ ಮಾಲೀಕ ಮತ್ತು ಸ್ಥಾಪಕ ಕೆಜಿ ಕಾಫಿ ಡೇ (ಸಿಸಿಡಿ) ವಿ.ಜಿ ಸಿದ್ಧಾರ್ಥ ಅವರ ಶವವನ್ನು ಬುಧವಾರ ಬೆಳಿಗ್ಗೆ 6: 50ರ ಸುಮಾರಿಗೆ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪತ್ತೆ ಮಾಡಲಾಗಿದೆ.ಸೋಮವಾರ ಸಂಜೆ ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಮೇಲಿಂದ ನಾಪತ್ತೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಕಾಫಿ ಡೇ ಮುಖ್ಯಸ್ಥ ಸಿದ್ದಾರ್ಥ್ ನದಿಗೆ ಹಾರಿ ಪ್ರಾಣ ಬಿಟ್ಟಿದ್ದರು.