ಅಂತಿಮ ಗಡುವು ಮುಕ್ತಾಯಕ್ಕೆ 1 ದಿನ ಬಾಕಿ: ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ..?

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಗೆ ಕೇಂದ್ರ ಸರ್ಕಾರ ನೀಡಿದ್ದ ಗಡವು ಶುಕ್ರವಾರ ಅಂದರೆ ಜೂನ್ 30 2023ಕ್ಕೆ ಮುಕ್ತಾಯವಾಗಿಲಿದ್ದು, ಈ ಅವಧಿಯೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದೇ ಇದ್ದಲ್ಲಿ ಏನಾಗುತ್ತದೆ..?
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಗೆ ಕೇಂದ್ರ ಸರ್ಕಾರ ನೀಡಿದ್ದ ಗಡವು ಶುಕ್ರವಾರ ಅಂದರೆ ಜೂನ್ 30 2023ಕ್ಕೆ ಮುಕ್ತಾಯವಾಗಿಲಿದ್ದು, ಈ ಅವಧಿಯೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದೇ ಇದ್ದಲ್ಲಿ ಏನಾಗುತ್ತದೆ..?

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ನಂಬರ್‌ ಅನ್ನು ಜೋಡಣೆ ಮಾಡಲು ಮಾ. 31 ಕಡೆಯ ದಿನವಾಗಿದ್ದು ಗಡುವು ಮುಕ್ತಾಯಗೊಳ್ಳಲು ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ. ನಿಗಧಿತ ಅವಧಿಯೊಳಗೆ ಜೋಡಣೆ ಮಾಡದಿದ್ದರೆ ಏ.1ರಿಂದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಲಿದೆ ಎಂದು ಸ್ವತಃ ಆದಾಯ ತೆರಿಗೆ ಇಲಾಖೆಯೇ ಎಚ್ಚರಿಕೆ ನೀಡಿದೆ. ಅದಾಗ್ಯೂ ಸಾಕಷ್ಟು ಮಂದಿ ತಮ್ಮ ತಮ್ಮ ಆಧಾರ್-ಪ್ಯಾನ್ ಲಿಂಕ್ ಮಾಡಿಲ್ಲ.. ನಿಮ್ಮ ಪ್ಯಾನ್ ಕಾರ್ಡ್-ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನಂತರ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಅಥವಾ ಅದು ಅಮಾನ್ಯವಾಗುತ್ತದೆ. ಪ್ಯಾನ್ ಕಾರ್ಡ್ ಹೊಂದಿದ ನಂತರವೂ ಅದನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ.  

ಲಿಂಕ್ ಮಾಡುವುದು ಏಕೆ ಮುಖ್ಯ?
ವಾಸ್ತವವಾಗಿ, ಕಳೆದ ಕೆಲವು ವರ್ಷಗಳಲ್ಲಿ, ನಕಲಿ ಪ್ಯಾನ್ ಕಾರ್ಡ್‌ಗಳ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ, ಇದರಿಂದಾಗಿ ಹಣಕಾಸಿನ ವಂಚನೆಯಂತಹ ಘಟನೆಗಳು ನಡೆದಿವೆ. ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವ ಕಾರಣ ತೆರಿಗೆ ವಂಚನೆಯಂತಹ ಪ್ರಕರಣಗಳು ಹೆಚ್ಚಿವೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆಧಾರ್-ಪ್ಯಾನ್ ಲಿಂಕ್ ಕಡ್ಡಾಯಗೊಳಿಸಿದೆ.

ಯಾರಿಗೆಲ್ಲಾ ವಿನಾಯಿತಿ
ಆಧಾರ್-ಪ್ಯಾನ್ ಲಿಂಕ್ ಮಾಡುವ ಕ್ರಮದಿಂದ ಕೇಂದ್ರ ಸರ್ಕಾರ ನಿರ್ದಿಷ್ಟ ಜನರಿಗೆ ವಿನಾಯಿತಿ ನೀಡಿದ್ದು, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ನೆಲೆಸಿರುವ ವ್ಯಕ್ತಿಗಳು ಆಧಾರ್-ಪ್ಯಾನ್ ಲಿಂಕ್ ಮಾಡುವ ಅವಶ್ಯಕತೆ ಇಲ್ಲ. ಅಂತೆಯೇ ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ಅನಿವಾಸಿ ತೆರಿಗೆ ಪಾವತಿಸುತ್ತಿರುವ ವ್ಯಕ್ತಿಗಳು 80 ವರ್ಷಕ್ಕಿಂತ ಮೇಲ್ಪಟ್ಟ ಜನರು (ಸೂಪರ್ ಸೀನಿಯರ್ ಸಿಟಿಜನ್ಸ್) ಮತ್ತು ಭಾರತದ ಪ್ರಜೆಗಳಲ್ಲದ ವ್ಯಕ್ತಿಗಳು ಆಧಾರ್-ಪ್ಯಾನ್ ಲಿಂಕ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಲಾಗಿದೆ.

ಆಧಾರ್-ಪ್ಯಾನ್ ಲಿಂಕ್ ಆಗದಿದ್ದರೆ ಏನೆಲ್ಲಾ ಸಮಸ್ಯೆ ಉದ್ಭವಿಸುತ್ತದೆ?
ಲಿಂಕ್ ಮಾಡದಿದ್ದರೆ, ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆಧಾರ್-ಪ್ಯಾನ್ ಲಿಂಕ್ ಗೆ ಈ ಹಿಂದೆ 500 ರೂ ದಂಡ ಇತ್ತು. ಈಗ ಈ ದಂಡವನ್ನು 1000 ರೂಗೆ ಏರಿಕೆ ಮಾಡಲಾಗಿದೆ. ಈಗಲೂ ನಾವು ಆಧಾರ್-ಪ್ಯಾನ್ ಲಿಂಕ್ ಮಾಡದೇ ಹೋದರೆ ಕೇಂದ್ರ ಸರ್ಕಾರ ಮತ್ತೆ ಗಡುವು ವಿಸ್ತರಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ನಿಷ್ಕ್ರಿಯವಾಗಿರುವ ಪ್ಯಾನ್ ಅನ್ನು ಬಳಸಲು ಯತ್ನಿಸಿದರೆ ದಂಡ ವಿಧಿಸಲಾಗುತ್ತದೆ. ಈ ದಂಡ 1,000 ರೂ.ನಿಂದ 10,000 ರೂ. ನಷ್ಟಿದೆ. ಇಂತಹ ತಪ್ಪು ಪುನರಾವರ್ತಿತವಾದ್ರೆ ಹೆಚ್ಚು ಕಠಿಣ ಕ್ರಮ ಮತ್ತು ಜೈಲಿಗೂ ಹೋಗಲು ಕಾರಣವಾಗಬಹುದು.

ತೆರಿಗೆ ಪ್ರಯೋಜನಗಳು ಮತ್ತು ವಹಿವಾಟುಗಳನ್ನು ಪಡೆಯುವಲ್ಲಿ ತೊಂದರೆ
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ರೆ, ನೀವು ವಹಿವಾಟುಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ಯಾನ್ ಇಲ್ಲದೆ ನೀವು ಒಂದೇ ಬಾರಿಗೆ 5000 ರೂ.ಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ನೀವು ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸಿದರೆ, ಅದು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯುವಲ್ಲಿ ಸಮಸ್ಯೆಗಳಿರುತ್ತವೆ. ಪ್ಯಾನ್, ಡಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಿಸದಿದ್ದಲ್ಲಿ, ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ತೆರಿಗೆದಾರರು ITR ಅನ್ನು ಸಲ್ಲಿಸಲು ಅಥವಾ ITR ಅನ್ನು ನಿಷ್ಕ್ರಿಯ PAN ಕಾರ್ಡ್‌ಗಳೊಂದಿಗೆ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಬಾಕಿಯಿರುವ ರಿಟರ್ನ್‌ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ ಮತ್ತು ಕಾರ್ಯನಿರ್ವಹಿಸದ PAN ಕಾರ್ಡ್‌ಗಳಿಗೆ ಬಾಕಿ ಇರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ. TCS/TDS ಹೆಚ್ಚಿನ ದರದಲ್ಲಿ ಅನ್ವಯವಾಗುತ್ತದೆ. TCS/TDS ಕ್ರೆಡಿಟ್ ಫಾರ್ಮ್ 26AS ನಲ್ಲಿ ಕಾಣಿಸುವುದಿಲ್ಲ ಮತ್ತು TCS/TDS ಪ್ರಮಾಣಪತ್ರಗಳು ಲಭ್ಯವಿರುವುದಿಲ್ಲ. ಶೂನ್ಯ TDS ಗಾಗಿ ತೆರಿಗೆದಾರರು 15G/15H ಘೋಷಣೆಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.

ಇದಲ್ಲದೆ, ಬ್ಯಾಂಕ್ ತೆರೆಯಲು, ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ವಿತರಣೆ ಅಸಾಧ್ಯ. ಅಂತೆಯೇ ರೂ.50,000 ಮೀರಿದ ಮ್ಯೂಚುವಲ್ ಫಂಡ್ ಘಟಕದ ಖರೀದಿ, ದಿನದಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ರೂ.50,000 ಕ್ಕಿಂತ ಹೆಚ್ಚಿನ ನಗದು ಠೇವಣಿ ಸಾಧ್ಯವಾಗುವುದಿಲ್ಲ. ದಿನದಲ್ಲಿ ರೂ.50,000 ಕ್ಕಿಂತ ಹೆಚ್ಚಿನ ನಗದು ರೂಪದಲ್ಲಿ ಬ್ಯಾಂಕ್ ಡ್ರಾಫ್ಟ್ ಅಥವಾ ಪಾವತಿ ಆದೇಶವನ್ನು ಖರೀದಿಸಲು ಸಾಧ್ಯವಿಲ್ಲ. 

ಬ್ಯಾಂಕ್‌ಗಳು, ನಿಧಿ, ಬ್ಯಾಂಕಿಂಗ್-ಅಲ್ಲದ ಹಣಕಾಸು ಸಂಸ್ಥೆಗಳು (NBFC ಗಳು), 50,000 ರೂಗಿಂತ ಹೆಚ್ಚು ಅಥವಾ ಆರ್ಥಿಕ ವರ್ಷದಲ್ಲಿ ರೂ. 2,50,000 ಕ್ಕಿಂತ ಹೆಚ್ಚಿನ ಮೊತ್ತದ ಸಮಯ ಠೇವಣಿ ಸಾಧ್ಯವಾಗುವುದಿಲ್ಲ. ಬ್ಯಾಂಕ್ ಡ್ರಾಫ್ಟ್, ಪೇ ಆರ್ಡರ್ ಅಥವಾ ಬ್ಯಾಂಕರ್ ಚೆಕ್ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವ್ಯಾಖ್ಯಾನಿಸಿದಂತೆ ಒಂದು ಅಥವಾ ಹೆಚ್ಚಿನ ಪ್ರಿಪೇಯ್ಡ್ ಪಾವತಿ ಸಾಧನಗಳಿಗೆ ಒಂದು ಹಣಕಾಸು ವರ್ಷದಲ್ಲಿ ರೂ.50,000 ಕ್ಕಿಂತ ಹೆಚ್ಚಿನ ಮೊತ್ತ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com