ಬಾಲಿವುಡ್ ನಿರ್ದೇಶಕ ಕರಣ್ ಜೋಹರ್
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್

ಪ್ರಶಸ್ತಿ ಅಥವಾ ಹಣಕ್ಕಾಗಿ ನಾನು ಪ್ರಧಾನ ಸಮಾರಂಭಗಳಿಗೆ ಹೋಗುವುದು: ಕರಣ್ ಜೋಹರ್

ಪ್ರಶಸ್ತಿ ಅಥವಾ ಹಣ ಸ್ವೀಕರಿಸುವುದಕ್ಕಾಗಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ಹಾಜರಾಗುವುದು ಎಂದಿದ್ದಾರೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್.
ಮುಂಬೈ: ಪ್ರಶಸ್ತಿ ಅಥವಾ ಹಣ ಸ್ವೀಕರಿಸುವುದಕ್ಕಾಗಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ಹಾಜರಾಗುವುದು ಎಂದಿದ್ದಾರೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್. 
ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಕೆಲವು ಬಾಲಿವುಡ್ ನಟರು ನಿಲುವು ತೆಗೆದುಕೊಂಡಿರುವುದರ ಬಗ್ಗೆ, ಶುಕ್ರವಾರ ನಡೆದ ೬೨ ನೇ ಜಿಯೋ ಫಿಲಂಫೇರ್ ಪ್ರಶಸ್ತಿ ೨೦೧೭ ಪತ್ರಿಕಾಗೋಷ್ಠಿಯಲ್ಲಿ ಕರಣ್ ಅವರನ್ನು ಪ್ರಶ್ನಿಸಿದಾಗ "ನಮ್ಮ ಉದ್ದಿಮೆಯಲ್ಲಿ ಅಂತಹ ನಿಲುವು ತೆಗೆದುಕೊಂಡಿರುವವರು ಕೆಲವೇ ಮಂದಿ. ಅಮೀರ್ ಖಾನ್ ಮತ್ತು ಕಂಗನಾ ರಣಾವತ್ ಅಂತಹವರು ಮಾತ್ರ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಬರುವುದೇ ಇಲ್ಲ. 
"ನಾನು ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ ಮತ್ತು ಅದಕ್ಕೆ ನನಗೆ ಇಷ್ಟವೂ ಇಲ್ಲ ಏಕೆಂದರೆ ಪ್ರಶಸ್ತಿ ಅಥವಾ ಹಣಕ್ಕಾಗಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಿಗೆ ಹೋಗುವುದು. ನಾನು ಫಿಲಂಫೇರ್ ಬರುವ ಕಾರಣ ಇತಿಹಾಸದ ಭಾಗವಾಗಬೇಕು" ಎಂದಿದ್ದಾರೆ. 
ಆದರೆ ಬಹಳಷ್ಟು ಪ್ರಶಸ್ತಿ ಪ್ರಧಾನ ಸಮಾರಂಭಗಳು ಇರುವುದರಿಂದ ಜನರ ಉತ್ಸಾಹಕ್ಕೆ ಪೆಟ್ಟು ಬಿದ್ದಿದೆ ಎಂದು ಅವರು ನಂಬುತ್ತಾರೆ. "ಆದುದರಿಂದ ಅವರ ಪ್ರಾಮಾಣಿಕತೆ ಮತ್ತು ನಂಬಿಕೆ, ಕೆಲವು ಬಾರಿ ಸಂದೇಹ ಮೂಡಿಸುತ್ತದೆ... ಅವುಗಳು ನಿಜವೋ ಅಥವಾ ಅಲ್ಲವೋ, ಜನ ಅವುಗಳನ್ನು ನೋಡುತ್ತಾರೆ. ಅಂತಹ ಸಮಾರಂಭಗಳು ಟಿವಿ ವಾಹಿನಿಗಳಲ್ಲಿ ಮೂಡಬೇಕೆಂದು ಬಯಸುತ್ತಾರೆ ಏಕೆಂದರೆ ಚಾನಲ್ ಗಳು ಹಲವಾರಿವೆ ಮತ್ತು ಟಿ ಆರ್ ಪಿ ಬೇಕಾಗಿರುತ್ತದೆ. ಜನ ಅವುಗಳನ್ನು ನೋಡಿ ನಂಬುತ್ತಾರೆ ಕೂಡ. 
"ಆದುದರಿಂದ ಅಂತಹ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಬಲ ನೀಡಬೇಕೋ ಅಥವಾ ದೂರವುಳಿಯಬೇಕೋ ಎಂಬ ಗೊಂದಲದಲ್ಲಿ ನಾವೆಲ್ಲಾ ಇದ್ದೇವೆ" ಎಂದು ಕರಣ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com