ಗಾಯಕ ಅಭಿಜಿತ್ ಭಟ್ಟಾಚಾರ್ಯ
ಗಾಯಕ ಅಭಿಜಿತ್ ಭಟ್ಟಾಚಾರ್ಯ

ಗಾಯಕ ಅಭಿಜಿತ್ ಹೊಸ ಟ್ವಿಟ್ಟರ್ ಖಾತೆ ಸಹ ವಜಾ!

ನಿಂದನಾತ್ಮಕ ಮತ್ತು ಅವಹೇಳನಕಾರಿ ಮಾತುಗಳನ್ನು ಬರೆದಿದ್ದಕ್ಕೆ ಖಾತೆ ವಜಾ ಮಾಡಿಸಿಕೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಒಂದು ವಾರದ ನಂತರ ಮತ್ತೊಂದು ಖಾತೆಯನ್ನು ತೆರೆದಿದ್ದರು.
ಮುಂಬೈ: ನಿಂದನಾತ್ಮಕ ಮತ್ತು ಅವಹೇಳನಕಾರಿ ಮಾತುಗಳನ್ನು ಬರೆದಿದ್ದಕ್ಕೆ ಖಾತೆ ವಜಾ ಮಾಡಿಸಿಕೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಒಂದು ವಾರದ ನಂತರ ಮತ್ತೊಂದು ಖಾತೆಯನ್ನು ತೆರೆದಿದ್ದರು. ಸೋಮವಾರ ಬೆಳಗ್ಗೆ ತೆರೆದಿದ್ದ @ಸಿಂಗರ್ ಅಭಿಜಿತ್ ಖಾತೆಯನ್ನು ಕೂಡ ರಾತ್ರಿಯೊಳಗೆ ಟ್ವಿಟ್ಟರ್ ಸಂಸ್ಥೆ ವಜಾಗೊಳಿಸಿದೆ. 
ಸೋಮವಾರ ಅವರ ಹೊಸ ಖಾತೆಯಲ್ಲಿ ಹಾಕಿದ್ದ ವಿಡಿಯೋವೊಂದರಲ್ಲಿ "ನನ್ನ ಧ್ವನಿಯನ್ನು ಅಡಗಿಸಲು ಜನ ಪ್ರಯತ್ನಿಸುತ್ತಿದ್ದಾರೆ. ದೇಶ ಮತ್ತು ಭಾರತೀಯ ಸೇನೆಯ ವಿರುದ್ಧ ಮಾತನಾಡುವುವರ ವಿರುದ್ಧ ನಾನು. ಇದು ನನ್ನ ಹೊಸ ಟ್ವಿಟ್ಟರ್ ಖಾತೆ" ಎಂದಿದ್ದರು. 
ಅಲ್ಲದೆ "ನನ್ನ ಪರಿಶೀಲಿತ ಖಾತೆ ಮತ್ತೆ ಹಿಂದಿರುಗುವವರೆಗೆ ದಯವಿಟ್ಟು ಇದನ್ನು ಅನುಸರಿಸಿ. ನನ್ನ ಹೆಸರಿನಲ್ಲಿರುವ ಉಳಿದೆಲ್ಲಾ ಖಾತೆಗಳು ನಕಲು ಮತ್ತು ನನ್ನ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸುತ್ತಿವೆ" ಎಂದು ಕೂಡ ಅವರು ಹೇಳಿದ್ದರು. 
ಎರಡನೇ ಖಾತೆಯ ವಿವರಗಳಲ್ಲಿ "ನಾನೇ ಅತ್ಯುತ್ತಮ... ನಾನೇ ಅತ್ಯುತ್ತಮ" ಎಂದು ೨೦೦೦ನೆ ಇಸವಿಯ 'ಫಿರ್ ಬಿ ದಿಲ್ ಹೈ ಹಿಂದೂಸ್ತಾನಿ' ಸಿನೆಮಾದ ಜನಪ್ರಿಯ ಹಾಡೊಂದರ ಸಾಲನ್ನು ಬರೆದುಕೊಂಡಿದ್ದರು. 
ಜೆ ಎನ್ ಯು ವಿದ್ಯಾರ್ಥಿ-ಕಾರ್ಯಕರ್ತೆ ಶೆಹ್ಲಾ ರಶೀದ್ ಅವರ ಬಗ್ಗೆ ಅಸಭ್ಯ ರೀತಿಯಲ್ಲಿ ನಿಂದನಾತ್ಮಕ ಪ್ರತಿಕ್ರಿಯೆ ನೀಡಿದ್ದರಿಂದ ಟ್ವಿಟ್ಟರ್ ಮೇ ೨೩ ರಂದು ಅಭಿಜಿತ್ ಅವರ ಪರಿಶೀಲಿತ ಖಾತೆಯನ್ನು ವಜಾಗೊಳಿಸಿತ್ತು. ನಂತರ ಗಾಯಕ ಟ್ವಿಟ್ಟರ್ ಅನ್ನು ದೇಶ ವಿರೋಧಿ, ಮೋದಿ ವಿರೋಧಿ ಎಂದೆಲ್ಲಾ ನಿಂದಿಸಿ ಆರೋಪ ಮಾಡಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com