ದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಸಮಾರಂಭದಲ್ಲಿ ಶಿಷ್ಟಾಚಾರ ಬದಲಾವಣೆ ಮಾಡಿರುವುದು ವಿಜೇತರ ಸಿಟ್ಟಿಗೆ ಕಾರಣವಾಗಿತ್ತು. ಶ್ರೇಷ್ಠ ನಟ, ನಟಿ, ನಿರ್ದೇಶಕ, ಶ್ರೇಷ್ಠ ಚಿತ್ರ ಹೀಗೆ ಪ್ರಮುಖ 11 ಪ್ರಶಸ್ತಿಗಳನ್ನು ಮಾತ್ರ ಈ ಬಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದ್ದರು. ನಂತರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ನೀಡಿದ್ದು ಇದನ್ನು ಹಲವು ವಿಜೇತರು ಬಹಿಷ್ಕರಿಸಿದರು.