social_icon

ಹಿಂದಿ ಚಿತ್ರರಂಗದ ಹಿರಿಯ ನಟ-ನಿರ್ದೇಶಕ ಸತೀಶ್ ಕೌಶಿಕ್ ನಿಧನ

ಹಿರಿಯ ನಟ ಹಾಗೂ ಚಿತ್ರ ನಿರ್ದೇಶಕ ಸತೀಶ್ ಕೌಶಿಕ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 66 ವರ್ಷವಾಗಿತ್ತು. ಅವರ ನಿಧನದ ಸುದ್ದಿಯನ್ನು ಅವರ ಸ್ನೇಹಿತ ಹಾಗೂ ಖ್ಯಾತ ಚಿತ್ರನಟ ಅನುಪಮ್ ಖೇರ್ ದೃಢಪಡಿಸಿದ್ದಾರೆ.

Published: 09th March 2023 08:18 AM  |   Last Updated: 09th March 2023 01:54 PM   |  A+A-


Satish Kaushik

ಸತೀಶ್ ಕೌಶಿಕ್

Posted By : Sumana Upadhyaya
Source : PTI

ನವದೆಹಲಿ: ಹಿರಿಯ ನಟ ಹಾಗೂ ಚಿತ್ರ ನಿರ್ದೇಶಕ ಸತೀಶ್ ಕೌಶಿಕ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 66 ವರ್ಷವಾಗಿತ್ತು. ಅವರ ನಿಧನದ ಸುದ್ದಿಯನ್ನು ಅವರ ಸ್ನೇಹಿತ ಹಾಗೂ ಖ್ಯಾತ ಚಿತ್ರನಟ ಅನುಪಮ್ ಖೇರ್ ದೃಢಪಡಿಸಿದ್ದಾರೆ.

ಅವರು ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಟ್ವೀಟ್ ಮಾಡಿ, ಈ ಜಗತ್ತಿನಲ್ಲಿ ಸಾವು ಅತ್ಯಂತ ಕಟ್ಟಕಡೆಯ ಸತ್ಯ ಎಂದು ನನಗೆ ಗೊತ್ತಿದೆ, ಆದರೆ ಈ ದಿನ ಬೆಳಗ್ಗೆ ನನ್ನ ಆಪ್ತ ಸ್ನೇಹಿತ ಸತೀಶ್ ಕೌಶಿಕ್ ನ ಸಾವಿನ ಬಗ್ಗೆ ಬರೆಯುತ್ತೇನೆ ಎಂದು ನಾನು ಕನಸಿನಲ್ಲಿ ಕೂಡ ಭಾವಿಸಿರಲಿಲ್ಲ. 45 ವರ್ಷಗಳ ನಮ್ಮ ಸ್ನೇಹಕ್ಕೆ ಹಠಾತ್ ಫುಲ್ ಸ್ಟಾಪ್ ಇಂದು ಬಿದ್ದಿದೆ. ಸತೀಶ್ ನೀನಿಲ್ಲದೆ ಜೀವನ ಹಿಂದಿನಂತೆ ಇರುವುದಿಲ್ಲ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಸತೀಶ್ ಕೌಶಿಕ್ ಅವರು ತಮ್ಮ ಕೊನೆಯ ಟ್ವೀಟ್ ಆಗಿ ಅನುಪಮ್ ಖೇರ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದರು. ಸತೀಶ್ ಕೌಶಿಕ್ ನಿಧನ ಸುದ್ದಿ ಕೇಳಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. 

1956ರ ಏಪ್ರಿಲ್ 13ರಂದು ಜನಿಸಿದ ಕೌಶಿಕ್ 1980ರ ದಶಕದಲ್ಲಿ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದರು. ಜಾನೆ ಬಿ ದೊ ಯಾರೊನ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಶೇಖರ್ ಕಪೂರ್ ಅವರ ಮಿ.ಇಂಡಿಯಾ ಚಿತ್ರದಲ್ಲಿ ಅತ್ಯಂತ ಯಶಸ್ವಿ ಪಾತ್ರ ನಿರ್ವಹಿಸಿ ಮನೆಮಾತಾದರು. ನಂತರ ದೀವಾನ ಮಸ್ತಾನ, ರಾಮ್ ಲಖನ್, ಸಾಜನ್ ಚಲೆ ಸಸುರಾಲ್ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು.

ನಂತರ ಶ್ರೀದೇವಿಯವರ ಚಿತ್ರ ರೂಪ್ ಕಿ ರಾಣಿ, ಚೊರೊನ್ ಕ ರಾಜ, ಪ್ರೇಮ್ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅವು ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲಿಲ್ಲ. ನಂತರ ನಿರ್ದೇಶಕರಾಗಿ ಅವರಿಗೆ ದೊಡ್ಡ ಹಿಟ್ , ಹೆಸರು ಕೊಟ್ಟ ಚಿತ್ರ ಹಮ್ ಆಪ್ ಕೆ ದಿಲ್ ಮೆ ರೆಹ್ತಾ ಹೈ.


Stay up to date on all the latest ಬಾಲಿವುಡ್ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp