ಮಧುರೈ : ಸೂಪರ್ಸ್ಟಾರ್ ರಜನೀಕಾಂತ್ ನಾಯಕನಾಗಿರುವ ಬಹುನಿರೀಕ್ಷಿತ ಚಿತ್ರ 'ಲಿಂಗಾ' ಕೃತಿಚೌರ್ಯ ನಡೆಸಿದೆ ಎಂಬ ಆರೋಪವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ತಳ್ಳಿಹಾಕಿದೆ.
'ಮುಲೈವನಂ 999' ಎಂಬ ಸಿನಿಮಾದ ಚಿತ್ರಕಥೆಯನ್ನು ಕದ್ದು "ಲಿಂಗಾ" ನಿರ್ಮಿಸಲಾಗಿದೆ ಎಂದು ಆ ಚಿತ್ರದ ಕತೆ ಬರೆದ ಕೆ.ಆರ್.ರವಿ ರತಿನಂ ಲಿಂಗಾ ನಿರ್ದೇಶಕರ ವಿರುದ್ಧ ದೂರು ನೀಡಿದ್ದರು.
ಪ್ರಸ್ತುತ ದೂರನ್ನು ತಳ್ಳಿ ಹಾಕಿದ ನ್ಯಾಯಮೂರ್ತಿ ಎಂ. ವೇಣುಗೋಪಾಲ್, ಇದೊಂದು ಖಾಸಗಿ ವಿವಾದವಾಗಿರುವುದರಿಂದ ರಿಟ್ ಅರ್ಜಿ ಸಲ್ಲಿಸುವ ಬದಲು ದೂರುದಾರರು ಸಿವಿಲ್ ಅಥವಾ ಕ್ರಿಮಿನಲ್ ನಡೆವಳಿ ಸ್ವೀಕರಿಸಬಹುದಾಗಿತ್ತು ಎಂದು ಸಲಹೆ ನೀಡಿದ್ದಾರೆ.
ಕೆ.ಎಸ್ ರವಿ ಕುಮಾರ್ ಅವರ 'ಲಿಂಗಾ' ಡಿಸೆಂಬರ್ 12, ರಜನೀಕಾಂತ್ ಅವರ 63ನೇ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ.
Advertisement