ಅನುರಾಗ್ ಕಶ್ಯಪ್ ಅದ್ಭುತ ನಿರ್ದೇಶಕ:ಶಾಹಿದ್ ಕಪೂರ್

ದೇಶದ ಅತ್ಯದ್ಭುತ ನಿರ್ದೇಶಕರಲ್ಲಿ ಅನುರಾಗ್ ಕಶ್ಯಪ್ ಒಬ್ಬರು ...
ಶಾಹಿದ್ ಕಪೂರ್
ಶಾಹಿದ್ ಕಪೂರ್
Updated on

ಮುಂಬೈ: ದೇಶದ ಅತ್ಯದ್ಭುತ ನಿರ್ದೇಶಕರಲ್ಲಿ ಅನುರಾಗ್ ಕಶ್ಯಪ್ ಒಬ್ಬರು ಎಂದಿದ್ದಾರೆ ಬಾಲಿವುಡ್ ನಟ ಶಾಹಿದ್ ಕಪೂರ್.

"ಅವರು ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ಹಾಗೂ ಅನುರಾಗ್ ಅವರ ಕೆಲಸವನ್ನು ನಾನು ಮನಸಾರೆ ಮೆಚ್ಚುತ್ತೇನೆ. ಅವರು ಸಾಮಾನ್ಯವಾಗಿ ಅತ್ಯುತ್ತಮ ಸಿನೆಮಾಗಳನ್ನೆ ನಿರ್ದೇಶಿಸುತ್ತಾರೆ" ಎಂದು ಅನುರಾಗ್ ಕಶ್ಯಪ್ ಅವರ ಸಿನೆಮಾ 'ಅಗ್ಲಿ' ವಿಶೇಷ ಪ್ರದರ್ಶನದ ವೇಳೆ ಮುಂಬೈನಲ್ಲಿ ಮಂಗಳವಾರ ಶಾಹಿದ್ ಕಪೂರ್ ತಿಳಿಸಿದ್ದಾರೆ.

"ನನ್ನ ಸಿನೆಮಾ 'ತೇರಿ ಮೇರಿ ಕಹಾನಿ' ಚಲನಚಿತ್ರದ ವೇಳೆ ಅನುರಾಗ್ ಅವರ 'ಗ್ಯಾಂಗ್ಸ್ ಆಫ್ ವಸೀಪುರ್' ಚಲನಚಿತ್ರ ಬಿಡುಗಡೆಗೊಂಡಿದ್ದು ನೆನಪಿದೆ. ನನ್ನ ಚಲನಚಿತ್ರಕ್ಕಿಂತ ಅದು ಒಳ್ಳೆಯ ಪ್ರದರ್ಶನ ನೀಡಿತ್ತು ಏಕೆಂದರೆ ಆ ಸಿನೆಮಾ ಹೆಚ್ಚು ಚೆನ್ನಾಗಿತ್ತು" ಎಂದು ಈ ಹಿಂದೆ ಅನುರಾಗ್ ಕಶ್ಯಪ್ ಅವರ 'ಫೂಲ್ ಅಂಡ್ ಫೈನಲ್' ಸಿನೆಮಾದಲ್ಲಿ ಈ ಹಿಂದೆ ಕೆಲಸ ಮಾಡಿದ್ದ ನಟ ಶಾಹಿದ್ ಕಪೂರ್ ತಿಳಿಸಿದ್ದಾರೆ.

ರಾಹುಲ್ ಭಟ್, ರೋನಿತ್ ರಾಯ್, ತೇಜಸ್ವಿನಿ ಕೊಲ್ಹಾಪುರೆ ಮತ್ತು ಸುರ್ವೀನ್ ಚಾವ್ಲಾ ಅಭಿನಯದ 'ಅಗ್ಲಿ' ಚಲನಚಿತ್ರವನ್ನು ಅನುರಾಗ್ ಕಶ್ಯಪ್ ಅವರೇ ಬರೆದು ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com