ನವದೆಹಲಿ: ಸೂಪರ್ ಸ್ಟಾರ್ ರಜನೀಕಾಂತ್ರ ಬಹು ನಿರೀಕ್ಷಿತ ಚಿತ್ರ 'ಲಿಂಗಾ'ಕ್ಕೆ ಹೊಸ ಸಮಸ್ಯೆಯೊಂದು ಎದುರಾಗಿದೆ.
'ಮುಲ್ಲೈ ವನಂ 999' ಎಂಬ ಸಿನಿಮಾದ ಚಿತ್ರಕಥೆಯನ್ನು ಕದ್ದು 'ಲಿಂಗಾ' ಸಿನಿಮಾ ನಿರ್ಮಿಸಲಾಗಿದೆ ಎಂದು ಆರೋಪ ಕೇಳಿ ಬಂದಿದ್ದು, ಲಿಂಗಾ ವಿರುದ್ಧ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಲಿಂಗಾ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕೋರ್ಟ್ ನೋಟಿಸ್ ನೀಡಿದ್ದು, ಇದೀಗ 'ಲಿಂಗಾ' ಚಿತ್ರ ಬಿಡುಗಡೆಗೆ ತಡೆ ನೀಡಿದೆ.
'ಮುಲ್ಲೈ ವನಂ 999 ಚಿತ್ರದ ಕಥೆ ಬರೆದ ಕೆ. ಆರ್. ರವಿ ರತಿನಂ ಎಂಬವರು 'ಲಿಂಗಾ' ವಿರುದ್ಧ ಕೋರ್ಟ್ಗೆ ದೂರು ನೀಡಿದ್ದರು. ತಮ್ಮ ಚಿತ್ರದ ಬಗ್ಗೆ ವೀಡಿಯೋ ತುಣುಕೊಂದನ್ನು ಅಪ್ಲೋಡ್ ಮಾಡಿದ್ದು, ಅದರಿಂದ ಕಥೆ ಕದಿಯಲಾಗಿದೆ ಎಂದು ರವಿ ಆರೋಪಿಸಿದ್ದಾರೆ.
ರವಿಯವರ ದೂರನ್ನು ಸ್ವೀಕರಿಸಿದ ನ್ಯಾಯಾಲಯ ಮಾಹಿತಿ ಮತ್ತು ಪ್ರಸಾರಂಗ ಸಚಿವಾಲಯದ ಕಾರ್ಯದರ್ಶಿ ಮತ್ತು ಅಧಿಕಾರಿಗಳಿಗೂ ನೋಟಿಸ್ ಕಳುಹಿಸಿದ್ದು, 2014 ನವೆಂಬರ್ 19ರೊಳಗೆ ಇದಕ್ಕೆ ಉತ್ತರಿಸಬೇಕೆಂದು ಆದೇಶಿಸಿದೆ.
Advertisement