'ಆಟಗಾರ'ನ ನನ್ನ ಆಟದಲ್ಲಿ ತೀವ್ರತೆ ಇದೆ: ಚಿರು

ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ' ಸಿನೆಮಾ ನಾಳೆ ಬಿಡುಗಡೆಗೆ ಸಿದ್ಧವಾಗಿದ್ದು, ಸಾಮಾನ್ಯವಾಗಿ ಅರಸಿ ಬರುವ ಪಾತ್ರಗಳಿಗಿಂತಲೂ ವಿಭಿನ್ನವಾದ ಸಾವಾಲೊಡ್ಡಿದ
ಆಟಗಾರ ಸಿನೆಮಾದಲ್ಲಿ ಚಿರಂಜೀವಿ ಸರ್ಜಾ
ಆಟಗಾರ ಸಿನೆಮಾದಲ್ಲಿ ಚಿರಂಜೀವಿ ಸರ್ಜಾ
Updated on
ಬೆಂಗಳೂರು: ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ' ಸಿನೆಮಾ ನಾಳೆ ಬಿಡುಗಡೆಗೆ ಸಿದ್ಧವಾಗಿದ್ದು, ಸಾಮಾನ್ಯವಾಗಿ ಅರಸಿ ಬರುವ ಪಾತ್ರಗಳಿಗಿಂತಲೂ ವಿಭಿನ್ನವಾದ ಸಾವಾಲೊಡ್ಡಿದ ಪಾತ್ರ ಇದು ಎನ್ನುತ್ತಾರೆ ಆಟಗಾರ ಸಿನೆಮಾದ ನಟ ಚಿರಂಜೀವಿ ಸರ್ಜಾ.
"ಈ ಬಿಡುಗಡೆ ನನಗೆ ವಿಶೇಷವಾದದ್ದು, ಏಕೆಂದರೆ ಇದು ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿದೆ. ಅಲ್ಲದೆ ನನ್ನ ಪಾತ್ರದ ತೀವ್ರತೆ ಎಷ್ಟಿದೆಯೆಂದರೆ ನಮ್ಮ ವೃತ್ತಿಪರ ಜೀವನಕ್ಕೆ ಇದು ಹೊಸ ಆಯಾಮ ನೀಡುತ್ತದೆ" ಎನ್ನುತ್ತಾರೆ ನಟ.
ಬಹುತಾರಾಗಣದ ಪಾತ್ರವಾಗಿರುವ ಚಿರು "ನಾನು ಸ್ಕ್ರಿಪ್ಟ್ ಓದಿದಾಕ್ಷಣ, ವಿಷಯದಲ್ಲಿ ಮುಳುಗಿಬಿಟ್ಟೆ. ನನ್ನ ಪಾತ್ರವನ್ನು ವೀಕ್ಷಕರು ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿ ಒಬ್ಬ ಹೀರೋ, ಒಬ್ಬ ಹೀರೋಯಿನ್ ಒಬ್ಬ ವಿಲನ್ ಇಲ್ಲ" ಎನ್ನುತ್ತಾರೆ. 
ಚಿರು ಜೊತೆ ನಟಿಸಿರುವ ಇತರ ನಟರು ಪರುಲ್ ಯಾದವ್, ಅನು ಪ್ರಭಾಕರ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲಾ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪಾವನಾ, ಅನಂತ್ ನಾಗ್, ರವಿಶಂಕರ್ ಮತ್ತಿತರು. 
ಅನೂಪ್ ಸೀಳಿನ್ ಅವರು ಆಟಗಾರ ಸಂಗೀತ ನಿರ್ದೇಶಕರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com