ಸೆಪ್ಟಂಬರ್ ನಾಲ್ಕರಂದು ಬೆಂಗಳೂರಿನಲ್ಲಿ ಸಂಸ್ಕಾರ ನಾಟಕ

ಅನಾವರಣ ರಂಗ ಸಂಸ್ಥೆ ಅರ್ಪಿಸುತ್ತಿರುವ, ಮೈಸೂರಿನ ರಂಗಾಯಣ ರಂಗಕರ್ಮಿಗಳು ಅಭಿನಯಿಸಿರುವ, ಖ್ಯಾತ ಲೇಖಕ ಯು ಆರ ಅನಂತಮೂರ್ತಿ ಅವರ
ನಾಟಕ ನಡೆಯಲಿರುವ ಸ್ಥಳ- ರವೀಂದ್ರ ಕಲಾಕ್ಷೇತ್ರ
ನಾಟಕ ನಡೆಯಲಿರುವ ಸ್ಥಳ- ರವೀಂದ್ರ ಕಲಾಕ್ಷೇತ್ರ
Updated on

ಬೆಂಗಳೂರು: ಅನಾವರಣ ರಂಗ ಸಂಸ್ಥೆ ಅರ್ಪಿಸುತ್ತಿರುವ, ಮೈಸೂರಿನ ರಂಗಾಯಣ ರಂಗಕರ್ಮಿಗಳು ಅಭಿನಯಿಸಿರುವ, ಖ್ಯಾತ ಲೇಖಕ ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯ ನಾಟಕ ರೂಪ ಸೆಪ್ಟಂಬರ್ ೪ ರಂದು ಪ್ರದರ್ಶನಗೊಳ್ಳಲಿದೆ.

ಈ ನಾಟಕವನ್ನು ಎಚ್ ಜನಾರ್ಧನ್ (ಜನ್ನಿ) ನಿರ್ದೇಶಿಸಿದ್ದು, ಅವರೇ ಸಂಗೀತವನ್ನು ಕೂಡ ನೀಡಿದ್ದಾರೆ. ಈ ನಾಟಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸೆಪ್ಟಂಬರ್ ನಾಲ್ಕರಂದು ಸಂಜೆ ೬:೪೫ ಕ್ಕೆ ನಡೆಯಲಿರುವ ನಾಟಕದಲ್ಲಿ ಭಾಗವಹಿಸಿ, ಪ್ರದರ್ಶನ ಯಶಸ್ವಿಗೊಳಿಸಬೇಕಾಗಿ ರಂಗತಂಡ ಕೋರಿದೆ.

ಹಿರಿಯ ರಂಗಕರ್ಮಿ ಅ ನಾ ರಮೇಶ ಅವರ ನೆನಪಿನಲ್ಲಿ ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9448130960

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com