ಬೆಂಗಳೂರು: 'ಉಗ್ರಂ' ಮೂಲಕ ಭಾರಿ ಯಶಸ್ಸು ಕಂಡ ಶ್ರೀಮುರಳಿ ಅದನ್ನು ಮರುಕಳಿಸುವ ಭರವಸೆಯಲ್ಲಿದ್ದಾರೆ. ಬಿಡುಗಡೆಯಾಗಲಿರುವ ತಮ್ಮ ಮುಂದಿನ ಸಿನೆಮಾ 'ರಥಾವರ'ದಲ್ಲಿ ತನು-ಮನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎನ್ನುವ ಮುರಳಿ, ಜನಮೆಚ್ಚುಗೆ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕನಟಿ. "ನಾನು ಸಿನೆಮಾ ನಿರ್ದೇಶನದಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಆದರೆ ಭಾಗಿಯಾಗಿದ್ದೆ. ನಾನು ಎಲ್ಲರಲ್ಲೂ ಸಂಪೂರ್ಣ ವಿಶ್ವಾಸ ಇಡುತ್ತೇನೆ. ಹಾಗೆಯೇ ಇಡೀ ತಂಡ ಒಟ್ಟಿಗೆ ಕೆಲಸ ಮಾಡಿದೆ" ಎನ್ನುತ್ತಾರೆ ಶ್ರೀಮುರಳಿ.
ಒಮ್ಮೆ ಯಶಸ್ಸು ಕಂಡ ನಂತರ ಅದನ್ನು ಪುನರಾವರ್ತಿಸುವುದು ಒತ್ತಡ ಎಂದು ಒಪ್ಪಿಕೊಳ್ಳುವ ಮುರಳಿ "ಎಲ್ಲರೂ ಮತ್ತೆ ಮತ್ತೆ ಯಶಸ್ಸು ಗಳಿಸಲು ಬಯಸುತ್ತಾರೆ. ಕಷ್ಟ ಪಟ್ಟು ಕೆಲಸ ಮಾಡಿದಾಗ ಅದು ಸಹಜ ನಿರೀಕ್ಷೆ. ಇದರ ಜೊತೆಗೆ ಸ್ವಲ ಅದೃಷ್ಟವೂ ಜೊತೆಗಿರಬೇಕು. ನನಗೆ ಭಯವಿಲ್ಲ ಆದರೆ ಒತ್ತಡವಿದೆ" ಎನ್ನುತ್ತಾರೆ.
ಚಿತ್ರೋದ್ಯಮದಲ್ಲಿರುವ ತೀವ್ರ ಸ್ಪರ್ಧೆಯ ಬಗ್ಗೆ ಮಾತನಾಡುವ ಮುರಳಿ "ಎಲ್ಲರೂ ಉತ್ತಮಗೊಳ್ಳುತ್ತಿದ್ದಾರೆ, ಇದು ಉಳಿದುಕೊಳ್ಳಲು ಅತಿ ಅವಶ್ಯಕ. ಇದರಿಂದ ಕಲಿಯುವುದು ಏನೆಂದರೆ ಯಾವುದರಲ್ಲಿ ತೊಡಗಿಸಿಕೊಂಡರು ಅದರಲ್ಲಿ ಶ್ರದ್ಧೆ ಅತಿ ಮುಖ್ಯ. ಅದನ್ನು ನಾನು ಅನುಸರಿಸುತ್ತಿದ್ದೇನೆ. ಕೊನೆಗೆ ಗಲ್ಲಾಪೆಟ್ಟಿಯ ಗಳಿಕೆಯೇ ಅಂತಿಮ. ನಿರ್ಮಾಪಕನಿಗೆ ಖುಷಿಯಾದರೆ ಕೆಲಸ ಮಾಡಿದವರಿಗೂ ಸಂತಸ. ಸದ್ಯಕ್ಕೆ ನನ್ನ ಗಮನ ಇರುವುದು ನಿರ್ಮಾಪಕ ಮತ್ತು ಪ್ರೇಕ್ಷಕರನ್ನು ಖುಷಿಗೊಳಿಸುವುದು" ಎನ್ನುತ್ತಾರೆ ಮುರಳಿ.
Advertisement