ದುನಿಯಾ ವಿಜಯ್-ನಾಗಶೇಖರ್ ಜೋಡಿಯಲ್ಲಿ 'ಮಾಸ್ತಿ ಗುಡಿ' - ಗಂಧದಗುಡಿ ಭಾಗ ೩

ನಿರ್ದೇಶಕ ನಾಗಶೇಖರ್ ನಿರ್ದೇಶಿಸಬೇಕಿದ್ದ ಬಹುಭಾಷಾ ಚಲನಚಿತ್ರ ಮುದಿನ ವರ್ಷ ಜೂನ್ ಗೆ ಮೂಂದೂಡಲಾಗಿದ್ದು, ಅಲ್ಲಿಯವರೆಗೆ ಸಮಯಹರಣ ಮಾಡದೆ ಹೊಸ ಸಿನೆಮಾವೊಂದನ್ನು
ನಟ ದುನಿಯಾ ವಿಜಯ್
ನಟ ದುನಿಯಾ ವಿಜಯ್
Updated on

ಬೆಂಗಳೂರು: ನಿರ್ದೇಶಕ ನಾಗಶೇಖರ್ ನಿರ್ದೇಶಿಸಬೇಕಿದ್ದ ಬಹುಭಾಷಾ ಚಲನಚಿತ್ರ ಮುದಿನ ವರ್ಷ ಜೂನ್ ಗೆ ಮೂಂದೂಡಲಾಗಿದ್ದು, ಅಲ್ಲಿಯವರೆಗೆ ಸಮಯಹರಣ ಮಾಡದೆ ಹೊಸ ಸಿನೆಮಾವೊಂದನ್ನು ಘೋಷಿಸಿದ್ದಾರೆ. ದುನಿಯಾ ವಿಜಯ್ ನಾಯಕ ನಟನಾಗಿ ನಟಿಸಲಿರುವ ಚಿತ್ರದ ಹೆಸರು 'ಮಾಸ್ತಿ ಗುಡಿ' ಮತ್ತು ಅಡಿ ಶೀರ್ಷಿಕೆ 'ಗಂಧದ ಗುಡಿ ಭಾಗ ೩'. ಸದ್ಯಕ್ಕೆ ವಿಜಯ್ ಅವರಿಗೆ ಒಂದು ಸಾಲಿನ ಕಥೆ ಹೇಳಿರುವ ನಾಗಶೇಖರ್, ಇಬ್ಬರೂ ಒಟ್ಟಿಗೆ ಸ್ಕ್ರೀನ್ ಪ್ಲೇ ಬರೆಯಲಿದ್ದಾರತೆ.

"ನಾನು ನನ್ನ ಬಹುಭಾಷಾ ಚಲನಚಿತ್ರ 'ಗಡಿಯಾರ'ಕ್ಕೆ ಹಸಿರು ನಿಶಾನೆ ಕೊಡಲು ನಿರ್ಮಾಪಕರಿಗೆ ಕಾಯುತ್ತಿದ್ದೆ. ಈ ನಡುವೆ ವಿಜಯ್ ಗಾಗಿ ಒಂದು ಸಾಲಿನ ಕಥೆ ಹೆಣೆಯಲು ಅವಕಾಶ ಸಿಕ್ಕಿತು. ಅವರು ಬೇರೊಬ್ಬ ನಿರ್ದೇಶಕನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ನನಗೆ ಸಮಯ ಇರುವುದನ್ನು ತಿಳಿದ ಅವರು ಸಿನೆಮಾ ನಿರ್ದೇಶಿಸಲು ನನಗೆ ತಿಳಿಸಿದ್ದಾರೆ" ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.

ಕಬಿನಿ ಅಣೆಕಟ್ಟಿನ ಬಳಿಯಿರುವ 'ಮಾಸ್ತಿಗುಡಿ' ದೇವಸ್ಥಾನದ ಬಳಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರವಂತೆ ಇದು. ದುನಿಯಾ ವಿಜಯ್ ಗೆಳೆಯರಾದ ಸುಂದರ್ ಪಿ ಗೌಡ ಮತ್ತು ಅನಿಲ್ ಕುಮಾರ್ ವಿ ಚಿತ್ರದ ನಿರ್ಮಾಪಕರು.

ಸಾಧು ಕೋಕಿಲಾ ಸಿನೆಮಾಗೆ ಸಂಗೀತ ನೀಡಲಿದ್ದು ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. ಇಬ್ಬರು ನಾಯಕನಟಿಯರ ಶೋಧನೆ ನಡೆಯುತ್ತಿದೆಯಂತೆ. "ಹುಲಿಗಳನ್ನು ಉಳಿಸಿ ಕಾಡು ಉಳಿಸಿ" ಎಂಬ ಧ್ಯೇಯ ಸಿನೆಮಾದಲ್ಲಿ ಧ್ವನಿಸಲಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com