ಐರಾವತ ಅರ್ಜುನ್ ಅವರ ಹೊಸ ಚಿತ್ರಕ್ಕೆ ಹೊಸ ನಟರು

ದರ್ಶನ್ ಅಭಿನಯದ 'ಐರಾವತ' ನಿರ್ದೇಶನದ ನಂತರ ಎ ಪಿ ಅರ್ಜುನ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು ಈ ಸಿನೆಮಾದಲ್ಲಿ ಹೊಸ ನಟರು ಕಾಣಿಸಿಕೊಳ್ಳಲಿದ್ದಾರಂತೆ.
ಎ ಪಿ ಅರ್ಜುನ್
ಎ ಪಿ ಅರ್ಜುನ್

ಬೆಂಗಳೂರು: ದರ್ಶನ್ ಅಭಿನಯದ 'ಐರಾವತ' ನಿರ್ದೇಶನದ ನಂತರ ಎ ಪಿ ಅರ್ಜುನ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು ಈ ಸಿನೆಮಾದಲ್ಲಿ ಹೊಸ ನಟರು ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕೂ ಮುಂಚೆ ಯೋಗಿ(ಅಂಬಾರಿ) ಮತ್ತು ಧ್ರುವ್ ಸರ್ಜಾ (ಅದ್ಧೂರಿ) ಇವರುಗಳನ್ನು ನಿರ್ದೇಶಿಸಿದ್ದ ಅರ್ಜುನ್ ಹೊಸಬರ ಜೊತೆಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

ಚಿತ್ರಿಕರಣಕ್ಕೂ ಮುಂಚಿನ ಕೆಲಸಗಳಲ್ಲಿ ನಿರತರಾಗಿರುವ ನಿರ್ದೇಶಕ "ಧ್ರುವ್ ಸರ್ಜಾ ಅವರ ಒಂದು ಸಿನೆಮಾ ನಿರ್ದೇಶಿಸಬೇಕಿತ್ತು ಆದರೆ ಅವರು 'ಭರ್ಜರಿ'ಯಲ್ಲಿ ಬ್ಯುಸಿಯಾಗಿರುವುದರಿಂದ ನಾನು ಹೊಸ ಯೋಜನೆಗೆ ಕೈಹಾಕಿದ್ದೇನೆ. ಹೊಸಬರ ಜೊತೆಗೆ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. ಹೊಸ ಪ್ರತಿಭೆಗಳನ್ನು ಗುರುತಿಸಿವುದಕ್ಕೆ ನಾನು ಯಾವಾಗಲು ಪ್ರಯತ್ನಿಸುತ್ತಿರುತ್ತೇನೆ" ಎನ್ನುತ್ತಾರೆ ಅರ್ಜುನ್.

"ಇದು ನಿರ್ಮಾಪಕನ ಚೊಚ್ಚಲ ಪ್ರಯತ್ನ ಆದುದರಿಂದ ಹೊಸಬರ ಜೊತೆಗೆ ಕೆಲಸ ಮಾಡುವಂತೆ ಅವರೇ ಸೂಚಿಸಿದರು" ಎನ್ನುತ್ತಾರೆ ಅರ್ಜುನ್. ೨೩ ವರ್ಷದ ಹೀರೋ ಮತ್ತು ೨೦ ವರ್ಷದ ಹಿರೋಯಿನ್ ಹುಡುಕಾಟದಲ್ಲಿರುವುದಾಗಿ ಅವರು ತಿಳಿಸುತ್ತಾರೆ,.

ಫೆಬ್ರವರಿ ೧೪ರೊಳಗೆ ಆಡಿಶನ್ ಗಳನ್ನು ಮುಗಿಸಿ ಮಾರ್ಚ್ ನಿಂದ ಚಿತ್ರೀಕರಣ ಮಾಡುವ ಉಮೇದಿನಲಿದ್ದಾರೆ. ೧೨ ರಿಂದ ೧೫ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ತಮಿಳು ಮತ್ತು ತೆಲುಗಿನಲ್ಲೂ ನಿರ್ಮಿಸಲು ನಿರ್ಮಾಪಕರು ಉತ್ಸುಕರಾಗಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com