2014ನ್ನು ವಿಶಿಷ್ಟವಾಗಿ ಬೀಳ್ಕೊಟ್ಟ ಯೋಗರಾಜ್-ಹರಿಕೃಷ್ಣ ಜೋಡಿ

ಜಗ್ಗೇಶ್, ರಕ್ಷಿತ್ ಶೆಟ್ಟಿ ಅಭಿನಯದ...
ಯೋಗರಾಜ್ ಭಟ್
ಯೋಗರಾಜ್ ಭಟ್
Updated on

ಬೆಂಗಳೂರು: ಜಗ್ಗೇಶ್, ರಕ್ಷಿತ್ ಶೆಟ್ಟಿ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ 'ವಾಸ್ತುಪ್ರಕಾರ' ಬಿಡುಗಡೆಗೆ ಸಿದ್ಧವಾಗಿದೆ. ಹರಿಕೃಷ್ಣ ಸಂಗೀತ ಇರುವ ಈ ಸಿನೆಮಾದ ಆಡಿಯೋ ಬಿಡುಗಡೆಯಾಗಿದ್ದರೂ ಇನ್ನೂ ಜನರ ನಾಲಿಗೆಯ ಮೇಲೆ ಸರ ಸರ ಹರಿದಾಡುತ್ತಿಲ್ಲ. ಬಹುಷಃ ಈ ಕೊರತೆಯನ್ನು ನೀಗಿಸಲೋ ಏನೋ, ಯೋಗರಾಜ್ -ಹರಿಕೃಷ್ಣ ಜೋಡಿ ೨೦೧೪ ನ್ನು ಬಿಳ್ಕೊಟ್ಟು ಹೊಸ ವರ್ಷವನ್ನು ಆಹ್ವಾನಿಸಲು ಈ ಹೊಸ ಹಾಡೊಂದನ್ನು ಸೃಷ್ಟಿಸಿದ್ದಾರೆ. ವಾಸ್ತು ಪ್ರಕಾರದ ಪ್ರಚಾರಕ್ಕಾಗಿಯೇ ಮಾಡಿರುವಂತಿದ್ದರೂ ಈ ಹಾಡು, ೨೦೧೪ನೆ ಇಸವಿಯ ವಿವಿಧ ವಿವಾದಾತ್ಮಕ ಘಟನೆಗಳನ್ನು ಮೆಲಕು ಹಾಕಿದೆ.

ಸಿದ್ಧು, ಯಡ್ಡಿ, ಜಯಲಲಿತಾ, ಮೈತ್ರಿಯಿ ಗೌಡ, ಸನ್ನಿ ಲಿಯೋನ್, ನಿತ್ಯಾನಂದ, ರಾಘವೇಶ್ವರ, ಚರ್ಚ್ ಸ್ಟ್ರೀಟ್ ಬಾಂಬು, ಸದನದಲ್ಲಿ ವಿಡಿಯೋ ನೋಡಿದ್ದು, ಗಾಂದಿನಗರದ ರಿಮೇಕು ಎಲ್ಲವೂ ಈ ಹಾಡಿನಲ್ಲಿ ಬಂದು ಹೋಗುತ್ತದೆ. ಈ ಹಾಡನ್ನು ಯೋಗರಾಜ್ ಮತ್ತು ಹರಿಕೃಷ್ಣ ಹಾಡಿದ್ದಾರೆ. ಈ ಹಾಡಾದರೂ ಯೋಗರಾಜ್ ಅವರ ಹೊಸ ಸಿನೆಮಾಗೆ ಅವಶ್ಯಕ ಪ್ರಚಾರ ನೀಡುತ್ತದೆಯೆ ಕಾದು ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com