ಮತ್ತೆ ದುನಿಯಾ ಕಿರಿಕ್: ನಿರ್ಮಾಪಕನಿಗೆ ಜೀವ ಬೆದರಿಕೆ

ನಟ ದುನಿಯಾ ವಿಜಯ್ ಅವರಿಗೆ
ನಟ ದುನಿಯಾ ವಿಜಯ್
ನಟ ದುನಿಯಾ ವಿಜಯ್
Updated on

ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ವಿವಾದಗಳು ಹೊಸದೇನಲ್ಲ. ಈಗ 'ಮಿಸ್ಟರ್ & ಮಿಸಸ್ ರಾಮಾಚಾರಿ'ಯ ನಿರ್ಮಾಪಕ ಜಯಣ್ಣ ಅವರಿಗೆ ಬೆದರಿಕೆ ಕರೆ ಮಾಡಿ ಹೊಸ ವಿವಾದವೊಂದನ್ನ ಸೃಷ್ಟಿಸಿದ್ದಾರೆ. ಈ ನಿಟ್ಟಿನಲ್ಲಿ ನಿರ್ಮಾಪಕ ಜಯಣ್ಣ ಸಿ ಸಿ ಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಪಾಲಿ ಚಿತ್ರಮಂದಿರದ ಮಾಲಿಕರೂ ಆಗಿರುವ ಜಯಣ್ಣನವರಿಗೆ 'ಜಾಕ್ಸನ್' ಚಿತ್ರವನ್ನು ಪ್ರದರ್ಶಿಸಲು ವಿಜಯ್ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಚಿತ್ರಮಂದಿರ 'ಶಿವಂ' ಸಿನೆಮಾಗೆ ಆಗಲೇ ಬುಕ್ ಆಗಿದ್ದರಿಂದ ಜಯಣ್ಣನವರು ನಿರಾಕರಿಸಿದ್ದಾರೆ. ಈ ವಾಗ್ವಾದದಲ್ಲಿ ದುನಿಯಾ ವಿಜಯ್, ಜಯಣ್ಣನವರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಪ್ರಕ್ರಿಯಿಸಿರುವ ದುನಿಯಾ ವಿಜಯ್, "ನನ್ನ ಮತ್ತು ಜಯಣ್ಣನವರ ಸಂಬಂಧ ಚೆನ್ನಾಗಿದೆ. ಜಯಣ್ಣನವರು ಚಲನಚಿತ್ರ ವಾಣಿಜ್ಯ ಮಂಡಲಿಗೆ ದೂರು ನೀಡಬೇಕಿತ್ತು. ನನಗೆ ಸಿ ಸಿ ಬಿ ಮೇಲೂ ನಂಬಿಕೆಯಿದೆ. ಇದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿದ್ದೇವೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com